ಮಾಲಿನಿ ಮಲ್ಯ ನಿಧನ: ನಳಿನ್ಕುಮಾರ್ ಕಟೀಲ್ ಸಂತಾಪ
ಇಎನ್ಎಲ್ ಹುಬ್ಬಳ್ಳಿ: ನಗರದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ. ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಬಗ್ಗೆ ನೀರಿಕ್ಷೆ ಇತ್ತು. ಮೇ ಮೊದಲ ವಾರದಲ್ಲಿ ಆಗುವ ನೀರಿಕ್ಷೆ ಇತ್ತು. ಇವತ್ತು ಮೇ 10 ಕ್ಕೆ ಚುನಾವಣೆ ಘೋಷಣೆಯಾಗಿದೆ. ಬಿಜೆಪಿ ಚುನಾವಣೆಗೆ ಅಣಿಯಾಗಿದೆ. ಮೋದಿ ಹಾಗೂ ಅಮಿತ್ ಶಾ ರಾಜ್ಯದಲ್ಲಿ ಪ್ರವಾಸ ಮಾಡಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಪೂರಕ ವಾತಾವರಣ ಇದೆ. ಜನರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಕಳೆದ ಎರಡು ಬಾರಿ ನಮಗೆ ಸ್ವಲ್ಪ ಕಡಿಮೆ ಸ್ಥಾನ ಬಂದಿತ್ತು.
ಎಸ್.ಸಿ ಪಟ್ಟಿಯಿಂದ ಯಾರನ್ನೂ ತೆಗೆಯುವ ಪ್ರಶ್ನೆ ಇಲ್ಲ ಕಾಂಗ್ರೆಸ್ ಪ್ರೇರಿತ ರಾಜಕೀಯ ಕುತಂತ್ರ: ಸಿಎಂ ಬೊಮ್ಮಾಯಿ
ಬಿಜೆಪಿಗೆ 60 ರಿಂದ 70 ಸ್ಥಾನ ಎಂಬ ಡಿಕೆಶಿ ಹೇಳಿಕೆಗೆ ಶೆಟ್ಟರ್ ತಿರುಗೇಟು. ಡಿಕೆಶಿವಕುಮಾರ್ ವಿರೋಧ ಪಕ್ಷದಲ್ಲಿ ಇದ್ದಾರೆ. ಮತ್ತೆ ಹಾಗೇ ಹೇಳಬೇಕು. ಡಿಕೆ ಶಿವಕುಮಾರ್ ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ. ಅವರು ಅಧಿಕಾರಕ್ಕೆ ಬರಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ.
ಮಾ.30 ರಂದು ವಧಾಲಯ, ಮಾಂಸದ ಅಂಗಡಿ ಬಂದ್
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ವಿಚಾರವಾಗಿ ಇನ್ಮೇಲೆ ಗಂಭೀರವಾಗಿ ಚರ್ಚೆ ಆಗುತ್ತೆ.
ಯಾರ ನಾಯಕತ್ವದಲ್ಲಿ ಚುನಾವಣೆ ಅನ್ನೋ ಪ್ರಶ್ನೆಗೆ ಹೈಕಮಾಂಡ್ ತೀರ್ಮಾನ ಮಾಡತ್ತೆ. ನಾನು 6 ಬಾರಿ ಗೆದ್ದಿದ್ದೇನೆ. ಮತ್ತೊಮ್ಮೆ ಜನ ಕೈ ಹಿಡಿಯುತ್ತಾರೆ. ನಾನೇ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ. ಸಿದ್ದರಾಮಯ್ಯ ಕ್ಷೇತ್ರ ಅಲೆದಾಟ ವಿಚಾರ. ಮನೆ ಗೆದ್ದು ಮಾರು ಗೆಲ್ಲು ಅನ್ನುವ ಗಾದೆ ಮಾತಿದೆ. ಒಂದು ಕ್ಷೇತ್ರ ಗೆಲ್ಲೋಕೆ ಆಗಲ್ಲ,ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಾರ್ಟಿ ಅಧಿಕಾರಕ್ಕೆ ತರುತ್ತಾರೆ. ನನಗೆ ಈವಾಗ ಕಾನ್ಫಿಡೆಂಟ್ ಇದೆ,ನಾನು ಗೆಲ್ಲುತ್ತೇನೆ ಅನ್ನೋದು
ಆದರೆ ಸಿದ್ದರಾಮಯ್ಯ ಅವರಿಗೆ ಕ್ಷೇತ್ರವೆ ಇಲ್ಲ. ಕಾಂಗ್ರೆಸ್ ಕಳೆದ ಬಾರಿ ಗೆದ್ದಿರುವ ಸ್ಥಾನ ಕ್ಕಿಂತ ಕಡಿಮೆ ಸ್ಥಾನ ಗೆಲ್ಲುತ್ತೆ.
ಈ ಬಾರಿಯ ಚುನಾವಣಾ ವಿಶೇಷ ಏನು ಗೊತ್ತಾ?
ಪಾರದರ್ಶಕವಾದ ಚುನಾವಣೆ ನಡೆಯಬೇಕಿದೆ. ಚುನಾವಣೆಯ ಸಂಧರ್ಭದಲ್ಲಿ ಪಕ್ಷಾಂತರ ಸಾಮಾನ್ಯ. ಇದೊಂದು ರಾಜಕೀಯ ವ್ಯವಸ್ಥೆ, ಇದರಿಂದಾಗಿ ರಾಜಕಾರಣದ ಮೇಲೆ ಪರಿಣಾಮ ಬೀರುವುದಿಲ್ಲ.