ಇಎನ್ಎಲ್ ಅಣ್ಣಿಗೇರಿ:
ಚುನಾವಣೆ ಮಾದರಿ ನೀತಿ ಸಂಹಿತೆಯನ್ವಯ ಸಭೆ ಸಮಾರಂಭ ನಡೆಸಲು ಹಾಗೂ ಪ್ರಚಾರ ಕೈಗೊಳ್ಳಲು ಪಾಲಿಸಬೇಕಾದ ನೀತಿ ನಿಯಮಗಳ ಕುರಿತು,ಕೋವಿಡ್-೧೯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪರಿಪಾಲನೆ ಮಾಡುವ ಬಗ್ಗೆ ಚುನಾವಣೆ ಖರ್ಚುವೆಚ್ಚಗಳ ಪ್ರತಿದಿನ ಸಂಬoಧಿಸಿದ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಲು ಪುರಸಭೆ ಚುನಾವಣೆ ಸಾರ್ವತ್ರಿಕ -೨೦೨೧ ರ ಚುನಾವಣೆ ವಿಕ್ಷಕರಾದ ರುದ್ರೇಶ ಎಸ್.ಎನ್ ವಿವರಿಸಿದರು.
ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪುರಸಭೆ ಚುನಾವಣೆ ಮಾದರಿ ನೀತಿ ಸಂಹಿತೆಯನ್ವಯ ಪಕ್ಷದ ಮುಖಂಡರು, ಅಭ್ಯರ್ಥಿಗಳು, ಅಧಿಕಾರಿಗಳು ಸಭೆ ಆಯೋಜಿಸಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಪೊಲೀಸ್ ಠಾಣಾಧಿಕಾರಿ ಎಲ್.ಕೆ.ಜ್ಯೂಲಿಕಟ್ಟಿ ಮಾತನಾಡಿ ಶಾಂತಿಯುತವಾಗಿ ಕಾನೂನು ಪ್ರಕಾರ ನಿರ್ವಹಿಸಲು ಸಭೆಯಲ್ಲಿ ಪಾಲ್ಗೊಂಡು ಮುಖಂಡರಿಗೆ ಹಾಗೂ ಅಭ್ಯರ್ಥಿಗಳಿಗೆ ತಿಳಿಸಿದರು. ಈ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕೆ.ಎಫ್.ಕಟಗಿ, ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.