ಇಎನ್ಎಲ್ ಧಾರವಾಡ: ಹುಬ್ಬಳ್ಳಿಯ ನೂಲ್ವಿ ಗ್ರಾಮದ ಸಿದ್ದಪ್ಪ ಯಲ್ಲಪ್ಪ ಜಿಡ್ಡಿ ( 52) ಮನೆ ಕಟ್ಟಿಸುವ ಸಲುವಾಗಿ ಹುಬ್ಬಳ್ಳಿಯ ಗ್ರಾಮ ಶಕ್ತಿ ಪೈನಾನ್ಸ್ ದಲ್ಲಿ ₹ 5ಲಕ್ಷ ಲೋನ್ ಮಾಡಿದ್ದನ್ನು ತೀರಿಸಲು ಸಾಧ್ಯವಾಗದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮಾ. 29ರ ರಾತ್ರಿ 2 ಗಂಟೆಯಿಂದ ಮಾ 30ರ ಬೆಳಗಿನ 6 ಗಂಟೆಯ ನಡುವಿನ ಅವಧಿಯಲ್ಲಿ ನೂಲ್ವೀ ಗ್ರಾಮದ ತನ್ನ ವಾಸದ ಮನೆಯ ಹಾಲದಲ್ಲಿ ಕಿಡಕಿಯ ಕಬ್ಬಿಣದ ಸಳಿಗೆ ಪತ್ತಲದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.
ಇದನ್ನು ಓದಿ:
ಯಾದವಾಡದ ಮಂಜು-ಮಡದಿ ನೆನಪಲ್ಲಿ ಮದ್ಯ ಕುಡಿದು ಸತ್ತ !! ಇದು ಪ್ರೇಮದ ವಿಷ!
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.