ಇಎನ್ಎಲ್ ಹುಬ್ಬಳ್ಳಿ: ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ 2023-25ನೇ ಸಾಲಿಗೆ ಅವಿರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳು ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ, ಉಪಾಧ್ಯಕ್ಷ ಅನೀಲ ಓಸ್ತವಾಲ, ಗೌರವ ಕಾರ್ಯದರ್ಶಿ ಅಶೋಕ ಬಾಳಿಕಾಯಿ, ಸಹಗೌರವ ಕಾರ್ಯದರ್ಶಿ ರವಿ ಮರದ ಇವರನ್ನು ಎಪಿಎಮ್’ಸಿ ಆಹಾರಧಾನ್ಯ ವರ್ತಕರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬೋರಟ್ಟಿ ಅವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳು, ಸದಸ್ಯರು ಸೇರಿ ಅ.17ರಂದು ಮಂಗಳವಾರ ಸಂಘದ ಕಟ್ಟಡದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಸಂಘದ ಉಪಾಧ್ಯಕ್ಷ ಅಗ್ರವಾಲ, ಗಣೇಶ ಕಟಾರೆ, ಶಿವಾನಂದ ಸಣ್ಣಕ್ಕಿ, ಚನ್ನು ಹೊಸಮನಿ, ಮಂಜುನಾಥ ಮುನವಳ್ಳಿ, ಶ್ರೀಕಾಂತ ಮಹಾಲೆ, ಮಮದಾಪೂರ, ರಾಜು ಶೀಲವಂತರ, ಉಮೇಶ ತೊಗ್ಗಿ ಮುಂತಾದವರು ಉಪಸ್ಥಿರಿದ್ದರು.
next post