30 C
Hubli
ಮಾರ್ಚ್ 19, 2024
eNews Land
ಅಪರಾಧ

ಸೆಲ್ಫಿ ಹುಚ್ಚು.. ಜೀವಕ್ಕೆ ಕುತ್ತು… ಜ್ಞಾನವೋ… ಅಜ್ಞಾನವೋ ಗೊತ್ತಿಲ್ಲ

ಇಎನ್ಎಲ್ ಕಲಘಟಗಿ: ತಾಲೂಕಿನ ಬೇಗೂರ ಗ್ರಾಮದ ಕಿರಣ ಪರಶುರಾಮ ರಜಪೂತ ಕೇವಲ 22 ವರ್ಷದ ವಿದ್ಯಾರ್ಥಿ ನೀರಸಾಗರ ಕೆರೆಯ ಹೊರ ಹರಿವು ನೀರಿನತ್ತ ನಿಂತು ಸೆಲ್ಫಿ ತೆಗೆಯಲು ಹೋದ ಸಮಯದಲ್ಲಿ ಕಾಲು ಜಾರಿ ಸಾವನ್ನಪ್ಪಿದ ಘಟನೆ ನಡೆದಿದೆ. ನಿನ್ನೆಯಿಂದ ನಿರಂತರ ಶೋಧ ನಡೆಸಿದರೆ ಮೃತ ದೇಹ ಸಿಕ್ಕಿರಲಿಲ್ಲ.

ಇಂದು ಕರಿಯಮ್ಮ ದೇವಿ ದೇವಸ್ಥಾನ ಹತ್ತಿರ ಕಿರಣ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕಲಘಟಗಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ತಾಯಿಯ ರೋಧನಕ್ಕೆ ತಡೆ ಒಡ್ದುವವರು ಯಾರು? ಇನ್ನಾದರೂ ಯುವಕ ಯುವತಿಯರು ಎಚ್ಚೆತ್ತು ಸೆಲ್ಫಿ ಹುಚ್ಚಿಗೆ ತಮ್ಮ ಜೀವಗಳನ್ನು ಬಲಿ ಕೊಡಬೇಡಿ ಎಂದು ಅಳಲನ್ನು ತೋಡಿಕೊಂಡರು.

Related posts

ಹೂಡಿಕೆ ಮಾಡಿಸುವುದಾಗಿ ಆನ್ಲೈನಲ್ಲಿ 4ಲಕ್ಷ ಪೀಕಿದ್ದವ ಮಹಾರಾಷ್ಟ್ರದಲ್ಲಿ ಅರೆಸ್ಟ್

eNewsLand Team

ಚಡ್ಡಿ ಖರೀದಿಗೆ ಹೋಗಿ ಲಕ್ಷ ಕಳೆದುಕೊಂಡ! ಆನ್ಲೈನ್ ಮುಂಡಾಮೋಚ್ತು!!

eNewsLand Team

ಸರಳ ವಾಸ್ತು ಸಂಸ್ಥಾಪಕ ಚಂದ್ರಶೇಖರ್ ಗುರೂಜಿ ಹತ್ಯೆ

eNEWS LAND Team