39 C
Hubli
ಏಪ್ರಿಲ್ 27, 2024
eNews Land
ಸಣ್ಣ ಸುದ್ದಿ

ಅಣ್ಣಿಗೇರಿ ತಾಲೂಕ ಫಾರ್ಮರ್ಸ್ ಪ್ರೋಡ್ಯುಸರ್ ಕಂಪನಿಗೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ

ಇಎನ್ಎಲ್ ಅಣ್ಣಿಗೇರಿ: ಅಣ್ಣಿಗೇರಿ ತಾಲೂಕ ಫಾರ್ಮರ್ಸ್ ಪ್ರೋಡ್ಯುಸರ್ ಕಂಪನಿಗೆ ಸಭಾಪತಿ ಬಸವರಾಜ ಹೊರಟ್ಟಿ ವಿಕ್ಷಣೆ ಮಾಡಿ ರಾಜ್ಯದಲ್ಲಿ ರೈತರ ಸಂಕಷ್ಟಗಳನ್ನು ಅರಿತು, ರೈತರ ಬೆಳೆ ಬಂದಾಗ, ಹಾಗೂ ಉತ್ತಮ ಬೆಲೆ ಸಿಗದಿದ್ದಾಗ, ಕಂಪನಿ ವತಿಯಿಂದ ಸೂಕ್ತ ನ್ಯಾಯ ದೊರಕಿಸುವಲ್ಲಿ ಅಣ್ಣಿಗೇರಿ ತಾಲೂಕ ಫಾರ್ಮರ್ಸ್ ಪ್ರೊಡ್ಯುಸರ್ ಕಂಪನಿ ರೈತರ ಕಲ್ಯಾಣಕ್ಕೆ ವೇಗವಾಗಿ ಪ್ರಗತಿಯತ್ತ ಸಾಗಬೇಕೆಂದು ಸಲುಹೆ ನೀಡಿದರು.

ಈ ಸಂದರ್ಭದಲ್ಲಿ ಅಣ್ಣಿಗೇರಿ ತಾಲೂಕ ಫಾರ್ಮರ್ಸ್ ಪ್ರೋಡ್ಯುಸರ್ ಕಂಪನಿ ಅಧ್ಯಕ್ಷ ಪ್ರಕಾಶ ಅಂಗಡಿ ಹಾಗೂ ಆಡಳಿತ ಮಂಡಳಿ ನಿರ್ಧೇಶಕರು, ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಿದರು. ನಾರಾಯಣ ಮಾಡೊಳ್ಳಿ, ವಿ.ಜಿ.ಮುದರಡ್ಡಿ, ಲಕ್ಷ್ಮಣ ಮುದುನಾಯ್ಕರ, ದ್ಯಾವನಗೌಡ ಪಾಟೀಲ, ಕೃಷ್ಣರಡ್ಡಿ ಮಾಡೊಳ್ಳಿ, ನಿಂಗಪ್ಪ ಬಡೆಪ್ಪನವರ, ಸತೀಶ ಕಡೆಮನಿ, ಭಗವಂತ ಪುಟ್ಟಣ್ಣವರ, ಬಸವರಾಜ ಹಾದಿಮನಿ, ಬಸಯ್ಯ ಹಿರೇಮಠ ಹಾಗೂ ರೈತ ಭಾಂದವರು ಉಪಸ್ಥಿತರಿದ್ದರು.

Related posts

ಕಲಘಟಗಿ: ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪ್ರಕಾಶ ದೂಪದ ಆಯ್ಕೆ

eNEWS LAND Team

ಮಾತೃಭಾಷೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬಹುದು: ಎಂ.ಆಯ್.ಮುಜಾವರ

eNEWS LAND Team

ಬೇಗೂರು ಗ್ರಾಪಂ ಸದಸ್ಯರಿಗೆ ಸನ್ಮಾನ: ಶಾಸಕ ನಿಂಬಣ್ಣವರ

eNEWS LAND Team