34 C
Hubli
ಮಾರ್ಚ್ 28, 2024
eNews Land
ಸಣ್ಣ ಸುದ್ದಿ

ವಾಲ್ಮೀಕಿ ಸಮಾಜದಿಂದ ಮೀಸಲಾತಿಗೆ ಪ್ರತಿಭಟನೆ

ಇಎನ್ಎಲ್ ಅಣ್ಣಿಗೇರಿ: ತಾಲೂಕಿನ ವಾಲ್ಮೀಕಿ ಸಮಾಜ ಭಾಂದವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸರ್ಕಾರ ಎಸ್.ಟಿ.ವರ್ಗಕ್ಕೆ 7.5 ಮಿಸಲಾತಿ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿ. ನಂತರ ತಹಶೀಲ್ದಾರ ಕಾರ್ಯಲಯಕ್ಕೆ ತೆರಳಿ ತಹಶೀಲ್ದಾರ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿದರು. ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀಗಳು ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಪ್ರೀಡಂ ಪಾರ್ಕನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ತಾಲೂಕಿನ ವಾಲ್ಮೀಕಿ ಸಮಾಜ ಬಾಂಧವರು ಸಂಪೂರ್ಣ ಬೆಂಬಲಿಸುವುದಾಗಿ ಹಾಗೂ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು. ಸಮಾಜದ ಮುಖಂಡರಾದ ಮೋಹನ ಗುಡಸಲಮನಿ, ಯಲ್ಲಪ್ಪ ದುಂದೂರ, ಮಾರುತಿ ಮರಡ್ಡಿ, ರಾಮಣ್ಣ ದೊಡ್ಡಮನಿ, ಅಮೃತ ಹಂಚಿನಾಳ ಭೀಮಪ್ಪ ಜಂತ್ಲಿ, ಸರ್ಕಾರ ಎಸ್.ಟಿ ಸಮದಾಯಕ್ಕೆ 7.5 ಮಿಸಲಾತಿ ನೀಡುವಂತೆ ಒತ್ತಾಯಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಭರತಕುಮಾರ ಅಜ್ಜಣ್ಣವರ, ಹನಮಂತಪ್ಪ ನೈನಾಪೂರ, ಶಿವಾನಂದ ತಹಶೀಲ್ದಾರ, ಬಸವರಾಜ ಜಾಲಿಹಾಳ, ಸುಭಾಸಚಂದ್ರ ನಾಯಕ, ವಿರೇಶ ಗೊಬ್ಬರಗುಂಪಿ, ಮಂಜುನಾಥ, ಶಿವಕುಮಾರ ಅಂಗಡಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಾಜ ಮುಖಂಡರು ಉಪಸ್ಥಿತರಿದ್ದರು.

 

Related posts

SWR: CONTINUATION OF TEMPORARY STOPPAGE OF TRAIN AT KRISHNADEVARAYA HALT: ಕೃಷ್ಣದೇವರಾಯ ಹಾಲ್ಟ್‌: ತಾತ್ಕಾಲಿಕ ನಿಲುಗಡೆ ಮುಂದುವರಿಕೆ

eNewsLand Team

ಅಣ್ಣಿಗೇರಿಯಲ್ಲಿ ಕಸಾಪ ಚುನಾವಣೆ ಪ್ರಚಾರ

eNEWS LAND Team

ಡಿ.10 ರಂದು ಮದ್ಯ ಮಾರಾಟ ನಿಷೇಧ

eNEWS LAND Team