33 C
Hubli
ಏಪ್ರಿಲ್ 27, 2024
eNews Land
ಜಿಲ್ಲೆ ಸುದ್ದಿ

ಫೆ.1 ರಿಂದ 15 ರ ವರೆಗೆ ಹೊಸಯಲ್ಲಾಪೂರ ಕೋಳಿಕೆರೆ ಹೂಳೆತ್ತುವ ಕಾರ್ಯ

ಇಎನ್ಎಲ್ ಧಾರವಾಡ :ಜಿಲ್ಲೆಯ ವಾರ್ಡ್ ನಂ.08 ರಲ್ಲಿ ಬರುವ ಹಿರೆಕೇರೆ (ಕೋಳಿಕೆರೆ) ಹೊಸಯಲ್ಲಾಪೂರದಲ್ಲಿ ಹೂಳು ಶೇಖರಣೆಗೊಂಡಿದೆ. ಹೂಳು ತೆಗೆದು ಸಾಗಿಸಲು ರೈತರಿಗೆ ಫೆಬ್ರವರಿ 1 ರಿಂದ 15 ರವರೆಗೆ ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಪಾಲಿಕೆ ವತಿಯಿಂದ ಜೆಸಿಬಿ ವ್ಯವಸ್ಥೆ ಮಾಡಲಾಗಿದ್ದು, ರೈತರು ತಮ್ಮ ಟ್ರ್ಯಾಕ್ಟರ್ ಹಾಗೂ ಟಿಪ್ಪರ್‍ಗಳನ್ನು ತಂದಲ್ಲಿ ಉಚಿತವಾಗಿ ಕೆರೆಯ ಹೂಳನ್ನು ತುಂಬಿಕೊಡಲಾಗುವುದು. ರೈತರು ಇದರ ಸದುಪಯೋಗ ಪಡೆಯಬೇಕೆಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Related posts

ಅಣ್ಣಿಗೇರಿ: ಕರ್ನಾಟಕ ಬಂದ್ ಬೆಂಬಲಿಸಿ ಪ್ರತಿಭಟನೆ

eNEWS LAND Team

ನೀತಿ ನಿಯಮಗಳ ಆಡಳಿತ ಬೇಕು: ಶಾಸಕ ನಿಂಬಣ್ಣವರ

eNEWS LAND Team

ಹಾವೇರಿ: ಎಪಿಎಂಸಿಲಿ ಇ-ಟೆಂಡರ್ ಮೂಲಕ ಮೆಕ್ಕೆಜೋಳ ವ್ಯಾಪಾರ

eNewsLand Team