32 C
Hubli
ಮೇ 5, 2024
eNews Land
ಅಪರಾಧ

ಮಿಲ್ಟ್ರಿ ಕ್ಯಾಂಟೀನ್ ಹೆಸರಲ್ಲಿ ದೋಖಾ!! ಸೈಕಲ್ ಕೊಟ್ಟ ಮಂಗ್ಯಾ ಆಗ್ಯಾರ!!

ಇಎನ್ಎಲ್ ಧಾರವಾಡ

ಮಿಲ್ಟ್ರಿ ಕ್ಯಾಂಟೀನ್‌ಗೆ ಸೈಕಲ್‌ ಬೇಕಾಗಿದೆ ಎಂದು ಹುಬ್ಬಳ್ಳಿ ಕೊಪ್ಪಿಕರ್‌ ರಸ್ತೆಯ ದೀಪಕ್‌ ಸೈಕಲ್‌ ಅಂಗಡಿಯ ವ್ಯವಸ್ಥಾಪಕ ಸುನೀಲ್‌ ವಕ್ಕುಂದ ಅವರಿಗೆ ಕರೆ ಮಾಡಿದ ವ್ಯಕ್ತಿ, ಅವರಿಂದ ₹70ಸಾವಿರ ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಕೇಶ್ವಾಪುರದ ಅರಿಹಂತನಗರದಲ್ಲಿರುವ ಮಿಲ್ಟ್ರಿ ಕ್ಯಾಂಟೀನ್‌ನಿಂದ ಮಾತನಾಡುತ್ತಿರುವುದಾಗಿ ಕರೆ ಮಾಡಿದ ವಂಚಕ, 20 ಸೈಕಲ್‌ಗಳ ಬೇಡಿಕೆ ಇಟ್ಟಿದ್ದ. ಅದಕ್ಕೆ ಸುನೀಲ್‌ ₹1.36 ಲಕ್ಷದ ಬಿಲ್‌ ಅನ್ನು ವಂಚಕನ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದರು. ನಂತರ ಸೈಕಲ್‌ಗಳನ್ನು ಕ್ಯಾಂಟೀನ್‌ ಬಳಿ ಸಾಗಿಸಿದಾಗ, ಕ್ಯಾಂಟೀನ್‌ ನಿಯಮದ ಪ್ರಕಾರ ನಾವು ಕಳುಹಿಸಿದ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಅದಕ್ಕೆ ₹1 ಸಂದಾಯ ಮಾಡಿದರೆ, ದುಪ್ಪಟ್ಟು ಬರುತ್ತದೆ. ಆ ಮೂಲಕವೇ ಸೈಕಲ್‌ ಹಣ ಪಾವತಿಸುವುದಾಗಿ ಹೇಳಿದ್ದಾನೆ. ಅದನ್ನು ನಂಬಿದ ವ್ಯವಸ್ಥಾಪಕರು ಹಂತ ಹಂತವಾಗಿ ಹಣ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಹುಬ್ಬಳ್ಳಿಯ ಭೂಮಾಪಕ ರಮೇಶ ನೀಲಪ್ಪ ಡವಳಗಿ ಜೈಲಿಗೆ: ಯಾಕೆ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

eNEWS LAND Team

ಇಎನ್ಎಲ್ ಎಕ್ಸಕ್ಲೂಸಿವ್: ವಾಸ್ತು ಪುರುಷ ಮಟಾಶ್ ಹಿಂದಿನ ಮಸಲತ್ತಿನ ಇಂಚಿಂಚು ಇನ್ಫಾರ್ಮೇಶನ್!! ಸ್ಕೆಚ್, ಮಟಾಶ್

eNEWS LAND Team

ಪೋಕ್ಸೋ ಆರೋಪಿಗೆ 4ವರ್ಷ3 ತಿಂಗಳು ಕಾರಾಗೃಹ ಶಿಕ್ಷೆ

eNewsLand Team