22 C
Hubli
ಸೆಪ್ಟೆಂಬರ್ 27, 2023
eNews Land
ಅಪರಾಧ

ಮಿಲ್ಟ್ರಿ ಕ್ಯಾಂಟೀನ್ ಹೆಸರಲ್ಲಿ ದೋಖಾ!! ಸೈಕಲ್ ಕೊಟ್ಟ ಮಂಗ್ಯಾ ಆಗ್ಯಾರ!!

ಇಎನ್ಎಲ್ ಧಾರವಾಡ

ಮಿಲ್ಟ್ರಿ ಕ್ಯಾಂಟೀನ್‌ಗೆ ಸೈಕಲ್‌ ಬೇಕಾಗಿದೆ ಎಂದು ಹುಬ್ಬಳ್ಳಿ ಕೊಪ್ಪಿಕರ್‌ ರಸ್ತೆಯ ದೀಪಕ್‌ ಸೈಕಲ್‌ ಅಂಗಡಿಯ ವ್ಯವಸ್ಥಾಪಕ ಸುನೀಲ್‌ ವಕ್ಕುಂದ ಅವರಿಗೆ ಕರೆ ಮಾಡಿದ ವ್ಯಕ್ತಿ, ಅವರಿಂದ ₹70ಸಾವಿರ ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಕೇಶ್ವಾಪುರದ ಅರಿಹಂತನಗರದಲ್ಲಿರುವ ಮಿಲ್ಟ್ರಿ ಕ್ಯಾಂಟೀನ್‌ನಿಂದ ಮಾತನಾಡುತ್ತಿರುವುದಾಗಿ ಕರೆ ಮಾಡಿದ ವಂಚಕ, 20 ಸೈಕಲ್‌ಗಳ ಬೇಡಿಕೆ ಇಟ್ಟಿದ್ದ. ಅದಕ್ಕೆ ಸುನೀಲ್‌ ₹1.36 ಲಕ್ಷದ ಬಿಲ್‌ ಅನ್ನು ವಂಚಕನ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದರು. ನಂತರ ಸೈಕಲ್‌ಗಳನ್ನು ಕ್ಯಾಂಟೀನ್‌ ಬಳಿ ಸಾಗಿಸಿದಾಗ, ಕ್ಯಾಂಟೀನ್‌ ನಿಯಮದ ಪ್ರಕಾರ ನಾವು ಕಳುಹಿಸಿದ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಅದಕ್ಕೆ ₹1 ಸಂದಾಯ ಮಾಡಿದರೆ, ದುಪ್ಪಟ್ಟು ಬರುತ್ತದೆ. ಆ ಮೂಲಕವೇ ಸೈಕಲ್‌ ಹಣ ಪಾವತಿಸುವುದಾಗಿ ಹೇಳಿದ್ದಾನೆ. ಅದನ್ನು ನಂಬಿದ ವ್ಯವಸ್ಥಾಪಕರು ಹಂತ ಹಂತವಾಗಿ ಹಣ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮೆಣಸಿನ ಸಸಿ ಕಿತ್ತು ವಿಕೃತಿ ಮೆರೆದ ದುಷ್ಕರ್ಮಿಗಳು

eNEWS LAND Team

ಯಾದವಾಡದ ಮಂಜು-ಮಡದಿ ನೆನಪಲ್ಲಿ ಮದ್ಯ ಕುಡಿದು ಸತ್ತ !! ಇದು ಪ್ರೇಮದ‌ ವಿಷ!

eNewsLand Team

 ‘ಆ’ ಚಿತ್ರಕ್ಕೆ ನಿಮ್ಮ ಫೋಟೊ..! ಲೋನ್ ಆ್ಯಪ್ ಡೌನ್ಲೋಡ್ ಮಾಡೋ ಮೊದ್ಲು ಎಚ್ಚರ! ಧಾರವಾಡ ಮಹಿಳೆಗೆ ಆಗಿದ್ದೇನು??

eNewsLand Team