ಇಎನ್ಎಲ್ ಧಾರವಾಡ: ಹುಬ್ಬಳ್ಳಿಯ ನೂಲ್ವೀ ಗ್ರಾಮದ ಗಂಗಾಧರ ನಗರದಲ್ಲಿರುವ ಲೋಹಿತ ಗುರುಸಂಗಪ್ಪ ಹೂಗಾರ ಅವರ ಮನೆಯ ಮುಂಚಿ ಬಾಗಿಲಕ್ಕೆ ಹಾಕಿದ್ದ ಕೀಲಿ ಮುರಿದ ಕಳ್ಳರು ಚಿನ್ನಾಭರಣ, ನಗದು ಕಳವು ಮಾಡಿ ಪರಾರಿಯಾಗಿದ್ದಾರೆ.
ಮನೆಯ ಒಳಹೊಕ್ಕ ಖದೀಮರು ಹಾಲ್ ನಲ್ಲಿ ಇದ್ದ ಟ್ರೇಜರಿ ಬಾಗಿಲು ತೆಗೆದು ಅದರಲ್ಲಿದ್ದ 35ಸಾವಿರ ರು. ಮೌಲ್ಯದ 10 ಗ್ರಾಂ ಬಂಗಾರದ ಚೈನ್, 18ಸಾವಿರ ರು. ಮೌಲ್ಯದ 150 ಗ್ರಾಂ ಬೆಳ್ಳಿ ಆರತಿ ಸೆಟ್, 100 ಗ್ರಾಂ ಬೆಳ್ಳಿ ತಾಟು, ಬೆಳ್ಳಿ ಶೆಮೆ 40 ಗ್ರಾಂ, ಕುಂಕುಮ ಇಡುವ ಬಟ್ಟಲುಗಳು, ಗಣಪತಿ ಮೂರ್ತಿ 20 ಗ್ರಾಂ., ಹಾಗೂ ನಗದು 30ಸಾವಿರ ರು. ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.