30 C
Hubli
ಮಾರ್ಚ್ 21, 2023
eNews Land
ಅಪರಾಧ

ನೂಲ್ವಿಯಲ್ಲಿ ಕಳ್ಳನ ಕೈಚಳಕ, ಚಿನ್ನಾಭರಣ, ನಗದು ಹೊತ್ತೊಯ್ದ: ದೂರು ದಾಖಲು

Listen to this article

ಇಎನ್ಎಲ್ ಧಾರವಾಡ: ಹುಬ್ಬಳ್ಳಿಯ ನೂಲ್ವೀ ಗ್ರಾಮದ ಗಂಗಾಧರ ನಗರದಲ್ಲಿರುವ ಲೋಹಿತ ಗುರುಸಂಗಪ್ಪ ಹೂಗಾರ ಅವರ ಮನೆಯ ಮುಂಚಿ ಬಾಗಿಲಕ್ಕೆ ಹಾಕಿದ್ದ ಕೀಲಿ ಮುರಿದ ಕಳ್ಳರು ಚಿನ್ನಾಭರಣ, ನಗದು ಕಳವು ಮಾಡಿ ಪರಾರಿಯಾಗಿದ್ದಾರೆ.

ಮನೆಯ ಒಳಹೊಕ್ಕ ಖದೀಮರು ಹಾಲ್ ನಲ್ಲಿ ಇದ್ದ ಟ್ರೇಜರಿ ಬಾಗಿಲು ತೆಗೆದು ಅದರಲ್ಲಿದ್ದ 35ಸಾವಿರ ರು. ಮೌಲ್ಯದ 10 ಗ್ರಾಂ ಬಂಗಾರದ ಚೈನ್, 18ಸಾವಿರ ರು. ಮೌಲ್ಯದ 150 ಗ್ರಾಂ ಬೆಳ್ಳಿ ಆರತಿ ಸೆಟ್, 100 ಗ್ರಾಂ ಬೆಳ್ಳಿ ತಾಟು, ಬೆಳ್ಳಿ ಶೆಮೆ 40 ಗ್ರಾಂ, ಕುಂಕುಮ ಇಡುವ ಬಟ್ಟಲುಗಳು, ಗಣಪತಿ ಮೂರ್ತಿ 20 ಗ್ರಾಂ., ಹಾಗೂ ನಗದು 30ಸಾವಿರ ರು. ಕಳವು ಮಾಡಿಕೊಂಡು ಹೋಗಿದ್ದಾರೆ.

ಈ ಬಗ್ಗೆ  ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related posts

ಹುಬ್ಬಳ್ಳಿಲಿ ಚಾಕು ಇರಿತ; ಗಾಯಾಳು ಕಿಮ್ಸನಲ್ಲಿ

eNewsLand Team

ಧಾರವಾಡದಲ್ಲಿ ಗಾಂಜಾ ಘಮಲು! ಒಬ್ಬ ಅರೆಸ್ಟ್

eNewsLand Team

ಧಾರವಾಡ; ಸಕ್ರಮ ಸಂಬಂಧ ಕಂಡ ಗಂಡ ಕೊಡಲಿಯಿಂದ ಕೊಲೆಯಾದ?!! ಪತ್ನಿಯಿಂದ ಸ್ಕೆಚ್??

eNewsLand Team