27.1 C
Hubli
ಮೇ 2, 2024
eNews Land
ಬ್ರೇಕಿಂಗ್ ಸುದ್ದಿ ರಾಜಕೀಯ

ಮುಖ್ಯಮಂತ್ರಿ ಬೊಮ್ಮಾಯಿ ಬಿಚ್ಚಿಟ್ಟ‌ ಮನದಾಳ ಮಾತೇನು? ಇಲ್ಲಿ ನೋಡಿ

ಇಎನ್ಎಲ್ ದೆಹಲಿ: 

ರಾಜ್ಯದ ಜನತೆ ನನ್ನನ್ನು ಒಬ್ಬ ಜನಸಾಮಾನ್ಯರ ಮುಖ್ಯಮಂತ್ರಿ ಎಂದು ಸ್ಮರಿಸಲು ಬಯಸುವುದಾಗಿ ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತಂದವನು ಎಂದು ಜನ ಗುರುತಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.

ರಾಜ್ಯದ ಜನ ಫಲಾನುಭವಿಗಳಿಗಿಂತ ಪಾಲುದಾರರಾಗಬೇಕು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಬುಧವಾರ ನವದೆಹಲಿಯಲ್ಲಿ ಟೈಮ್ಸ್ ನೌವ್ ಸಮಿಟ್ ನಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕರ್ನಾಟಕವನ್ನು ಹೇಗೆ ಮುನ್ನಡೆಸಲು ಬಯಸುವಿರಿ ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳು ನೀಡಿದ ಪ್ರತಿಕ್ರಿಯೆ ಇದು.

ರಾಜ್ಯದಲ್ಲಿ ಅತ್ಯುತ್ತಮ ಹವಾಮಾನ, ಕೌಶಲ್ಯಯುಕ್ತ ಮಾನವ ಸಂಪನ್ಮೂಲವಿದೆ. ಆಧುನಿಕ ಕೃಷಿ ತಂತ್ರಜ್ಞಾನದಿಂದ ಹಿಡಿದು ಮಾಹಿತಿ ತಂತ್ರಜ್ಞಾನದವರೆಗೆ, ಬಾಹ್ಯಾಕಾಶ ತಂತ್ರಜ್ಞಾನದಿಂದ ಕೃತಕ ಬುದ್ಧಿಮತ್ತೆಯವರೆಗೆ ರಾಜ್ಯ ಮುಂಚೂಣಿಯಲ್ಲಿದೆ. ಇವೆಲ್ಲಾ ನಮ್ಮ ಶಕ್ತಿಯಾಗಿದ್ದು, ಈ ಶಕ್ತಿಯ ಸದ್ಬಳಕೆ ಮಾಡುವುದು ನನ್ನ ಆಶಯ ಎಂದರು.

ನಿಮ್ಮ ತಂದೆಯ ಹಾಗೂ ಬಿ.ಎಸ್.ವೈ. ಅವರ ಪರಂಪರೆಯನ್ನು ಮುಂದುವರೆಸುವ ಒತ್ತಡ ನಿಮ್ಮ ಮೇಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ರಾಜಕೀಯವಾಗಿ ಹೌದು. ಆದರೆ ಈ ಹಿಂದೆ ಐದು ಮುಖ್ಯಮಂತ್ರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ ಅನುಭವ ಈಗ ಉಪಯೋಗಕ್ಕೆ ಬಂದಿರುವುದಾಗಿ ತಿಳಿಸಿದರು.

Related posts

ರಾಷ್ಟ್ರೀಯ ನಾಯಕರ ಪ್ರವಾಸದ ಕುರಿತು ಚರ್ಚೆ: ಸಿಎಂ ಬೊಮ್ಮಾಯಿ

eNEWS LAND Team

ಕಾಂಗ್ರೆಸ್ ಇಂದ ಜೆಡಿಎಸ್ ಗೆ ಬಂದ ಅಭ್ಯರ್ಥಿ

eNEWS LAND Team

ಒತ್ತಡ ನಿವಾರಣೆಗೆ ಸಿಎಂ ಬೊಮ್ಮಾಯಿ‌ ಏನು ಮಾಡ್ತಾರೆ? ಅವರೇನು ಹೇಳಿದ್ರು?

eNEWS LAND Team