27.1 C
Hubli
ಮೇ 2, 2024
eNews Land
ಅಪರಾಧ ಕೃಷಿ

ನವಲಗುಂದ: ಸಾಲಬಾಧೆಗೆ ಕೆರೆಗೆ ಹಾರಿ ರೈತ ಆತ್ಮಹತ್ಯೆ

ಇಎನ್ಎಲ್ ಧಾರವಾಡ: ನವಲಗುಂದ ತಾಲೂಕಿನ ಅಳಗವಾಡಿ ಯುವ ರೈತ ಸಾಲಬಾಧೆ ಕಾರಣಕ್ಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಸವರಾಜ ಬಸಪ್ಪ ಗೊಬ್ಬರಗುಂಪಿ (25) ಮೃತಪಟ್ಟ ರೈತ. ಈತ ಕಳೆದ ನಾಲ್ಕು ತಿಂಗಳ ಹಿಂದೆ ಅಳಗವಾಡಿ ಕೆವಿಜಿ ಬ್ಯಾಂಕಿನಲ್ಲಿ ತಂದೆಯ ಹೆಸರಲ್ಲಿ 1.65 ಲಕ್ಷ ರುಪಾಯಿ ಸಾಲ ತೆಗೆದುಕೊಂಡಿದ್ದ‌. ಈಚೆಗೆ ಸುರಿದ ಭಾರಿ ಮಳೆಯಿಂದ ಬೆಳೆ ನಾಶವಾದ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಮಾಡುವ ಬಗ್ಗೆ ಚಿಂತಿತನಾಗಿದ್ದ‌.

ಶುಕ್ರವಾರ ನಸುಕಿನ ವೇಳೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಹುಬ್ಬಳ್ಳಿ: ಭೀಕರ ಅಪಘಾತ, ಚಾಲಕ ಸ್ಥಳದಲ್ಲೇ ಸಾವು

eNewsLand Team

ಮಿಲ್ಟ್ರಿ ಕ್ಯಾಂಟೀನ್ ಹೆಸರಲ್ಲಿ ದೋಖಾ!! ಸೈಕಲ್ ಕೊಟ್ಟ ಮಂಗ್ಯಾ ಆಗ್ಯಾರ!!

eNEWS LAND Team

ಕೆಎಲ್ಇ ಆಸ್ಪತ್ರೆ ಆವರಣದಲ್ಲೇ ಗಾಂಜಾ ಬೆಳೆಸಿದ ಬೇವಕೂಫ್’ಗಳು !!

eNEWS LAND Team