ಇಎನ್ಎಲ್ ಧಾರವಾಡ: ನವಲಗುಂದ ತಾಲೂಕಿನ ಅಳಗವಾಡಿ ಯುವ ರೈತ ಸಾಲಬಾಧೆ ಕಾರಣಕ್ಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಸವರಾಜ ಬಸಪ್ಪ ಗೊಬ್ಬರಗುಂಪಿ (25) ಮೃತಪಟ್ಟ ರೈತ. ಈತ ಕಳೆದ ನಾಲ್ಕು ತಿಂಗಳ ಹಿಂದೆ ಅಳಗವಾಡಿ ಕೆವಿಜಿ ಬ್ಯಾಂಕಿನಲ್ಲಿ ತಂದೆಯ ಹೆಸರಲ್ಲಿ 1.65 ಲಕ್ಷ ರುಪಾಯಿ ಸಾಲ ತೆಗೆದುಕೊಂಡಿದ್ದ. ಈಚೆಗೆ ಸುರಿದ ಭಾರಿ ಮಳೆಯಿಂದ ಬೆಳೆ ನಾಶವಾದ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಮಾಡುವ ಬಗ್ಗೆ ಚಿಂತಿತನಾಗಿದ್ದ.
ಶುಕ್ರವಾರ ನಸುಕಿನ ವೇಳೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.