ಮೇ 9, 2024
eNews Land
ಕೃಷಿ ರಾಜ್ಯ

ಮಲಪ್ರಭಾ ಮಹಾದಾಯಿ ರೈತ ಹೋರಾಟ ಒಕ್ಕೂಟ ಬಂದ್‍ಗೆ ಬೆಂಬಲ.

ಇಎನ್ಎಲ್ ನವಲಗುಂದ: ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ಕರೆಗೆ ಬೆಂಬಲವಾಗಿ ಪಟ್ಟಣದ ವ್ಯಾಪಾರಸ್ಥರ ಸಂಘದವರಿಗೂ ಬಂದ್ ಕರೆಗೆ ಸ್ವಯಂಕೃತವಾಗಿ ಬೆಂಬಲಿಸಿ ಕಾವೇರಿ ನೀರಿಗಾಗಿ ತಮ್ಮ ಬೆಂಬಲ ನೀಡಬೇಕು ಹಾಗೂ ತಾಲೂಕಿನ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿರುವಂತಹ ಎಲ್ಲ ರೈತರು ರಾಜ್ಯದ ಕಾವೇರಿ ನದಿ ನೀರಿಗಾಗಿ ನಡೆದ ಹೋರಾಟಕ್ಕೆ ಕೈಗೂಡಿಸಬೇಕೆಂದು ಮಲಪ್ರಭಾ ಮಹಾದಾಯಿ ಕಳಸಾ ಬಂಡೂರಿ ರೈತ ಹೊರಾಟ ಒಕ್ಕೂಟ ಕೇಂದ್ರದ ಅಧ್ಯಕ್ಷ ಲೋಕನಾಥ ಹೆಬಸೂರ ವಿನಂತಿಸಿದ್ದಾರೆ.
ಕರ್ನಾಟಕ ಬಂದ್ ಕರೆಗೆ ಧ್ವನಿಯಾಗಿ ರಾಷ್ಟೀಯ ಹೆದ್ದಾರಿ ಬಂದ್ ಮಾಡುವುದರ ಮೂಲಕ ಬೆಂಬಲಿಸಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿ ಕಾವೇರಿ ನದಿ ನೀರಿಗಾಗಿ ನಡೆದ ರಾಜ್ಯದ ಜನರ ಹಿತಕ್ಕಾಗಿ ತಮ್ಮ ಬೆಂಬಲವನ್ನು ನೀಡಬೇಕೆಂದು ಕರೆ ನೀಡಿದರು.

Related posts

ಕೇಂದ್ರದಲ್ಲಿ ಸ್ಪಂದನಾಶೀಲ ಸರ್ಕಾರವಿದೆ: ಸಿಎಂ ಬೊಮ್ಮಾಯಿ

eNEWS LAND Team

ಸೋಲು ಗೆಲುವು ಸಮವಾಗಿ ಸ್ವೀಕರಿಸುತ್ತೇವೆ : ಸಿ.ಎಂ.ಬೊಮ್ಮಾಯಿ

eNEWS LAND Team

ಸಮಗ್ರ ಕೃಷಿಯಿಂದ ಮಾತ್ರ ರೈತರಿಗೆ ಆರ್ಥಿಕ ಸಬಲತೆ ಸಾಧ್ಯ: ಗೀತಾ ಮರಲಿಂಗಣ್ಣವರ

eNEWS LAND Team