23.8 C
Hubli
ಮಾರ್ಚ್ 28, 2023
eNews Land
ಕೃಷಿ ಸಣ್ಣ ಸುದ್ದಿ

ಸಮಗ್ರ ಕೃಷಿಯಿಂದ ಮಾತ್ರ ರೈತರಿಗೆ ಆರ್ಥಿಕ ಸಬಲತೆ ಸಾಧ್ಯ: ಗೀತಾ ಮರಲಿಂಗಣ್ಣವರ

Listen to this article

ಇಎನ್ಎಲ್ ಕಲಘಟಗಿ: ಪಟ್ಟಣದ ಹೊರವಲಯದಲ್ಲಿರುವ ಹನ್ನೆರಡು ಮಠದಲ್ಲಿ ಆಯೋಜಿಸಿದ್ದ ಹಾಲು ಉತ್ಪಾದಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಾ ರೈತರು ಇಂದಿನ ದಿನಮಾನಗಳಲ್ಲಿ ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿ ಆರ್ಥಿಕ ಏರಿಳಿತವನ್ನು ಕಂಡಾಗ ಹೈನುಗಾರಿಕೆಯಿಂದ ಆರ್ಥಿಕ ಸಬಲತೆ ಸಾಧ್ಯವಾಗುತ್ತದೆ ಎಂದು ಕೆಎಂಎಫ್ ಧಾರವಾಡ ಘಟಕದ ನಿರ್ದೇಶಕಿ ಗೀತಾ ಮರಲಿಂಗಣ್ಣವರ ಹೇಳಿದರು.

ಕುಟುಂಬ ನಿರ್ವಹಣೆ ಕೂಡ ಸಾಧ್ಯವಾಗುತ್ತದೆ ಒಕ್ಕೂಟದಿಂದ ಸಂಘದ ಸದಸ್ಯರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಹಾಗೂ ಶಿಕ್ಷಣಕ್ಕಾಗಿ ಸಹಾಯ, ಶವ ಸಂಸ್ಕಾರಕ್ಕಾಗಿ ಹಣಸಹಾಯ ಸಂಸ್ಥೆಯಿಂದ ಮಾಡಲಾಗುತ್ತಿದೆ, ಎಲ್ಲ ಸದಸ್ಯರು ಹೆಚ್ಚು ಹಾಲು ಉತ್ಪಾದನೆ ಮಾಡಿ ಸಂಸ್ಥೆಯ ಪ್ರಯೋಜನ ಪಡೆಯಬೇಕು ಎಂದರು. ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಮಾತನಾಡಿ ರೈತರ ಅಭಿವೃದ್ಧಿಗಾಗಿ ಅವರ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವಸತಿ ನಿಲಯ, ಕಲ್ಯಾಣ ಮಂಟಪ ನಿರ್ಮಾಣವನ್ನು ಸರ್ಕಾರದ ಸಹಯೋಗದಲ್ಲಿ ಮಾಡಲಾಗುತ್ತಿದೆ ಸಭೆಯಲ್ಲಿ ಸಂಘದ ಸದಸ್ಯರು ಸಮಸ್ಯೆಗಳಿಗೆ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಕೂಡಲೇ ಪರಿಹಾರ ನೀಡಲಾಗುವುದು ಎಂದರು. ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪಿಯುಸಿಯಲ್ಲಿ ಉತ್ತಮ ಸಾಧನೆ ತೋರಿದಕ್ಕಾಗಿ ಸಂಘದ ಸದಸ್ಯರ ಮಕ್ಕಳಿಗೆ ರೂ.10,000/- ಚೆಕ್ ಗಳನ್ನು ನೀಡಲಾಯಿತು. ಈ ವೇಳೆ ಡಾಕ್ಟರ್ ಕೆ.ಎಂ.ಲೋಹಿತೇಶ್ವರ. ಎಮ್.ಬಿ.ವಡ್ಡಟ್ಟಿ, ಎಮ್.ಎಮ್. ಹಿರೇಗೌಡರ್, ಸೋಮಶೇಖರ್ ಪಾಟೀಲ್, ಸಂಘದ ಸದಸ್ಯರು ಹಾಗೂ ಉಪಸ್ಥಿತರಿದ್ದರು.

Related posts

ಬೆಳೆ ಪರಿಹಾರ ಶೀಘ್ರ ಕ್ರಮ : ಸಿಎಂ ಬೊಮ್ಮಾಯಿ

eNewsLand Team

ಬೆಳ್ಳಂಬೆಳಗ್ಗೆ ಮಹಾನಗರ ಪಾಲಿಕೆ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭಿಸಿದೆ.

eNEWS LAND Team

ಕಲಘಟಗಿ: ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ

eNEWS LAND Team