37 C
Hubli
ಮೇ 5, 2024
eNews Land
ಸುದ್ದಿ

ರೈತರ ಸಮಸ್ಯೆ ನೀಗಿಸಲು ಒಂದಾಗೋಣ: ಸಿಎಂ ಕರೆ

ಇಎನ್ಎಲ್ ಧಾರವಾಡ: ರೈತರ ವಿಷಯ ಬಂದಾಗ, ರೈತರ ಸಮಸ್ಯೆ ವಿಷಯ ಬಂದಾಗ ಬೇರೆಲ್ಲವನ್ನು ಮರೆತು ನಾವು ಒಗ್ಗಟಾಗಿ ಕೆಲಸ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು.

ಅವರು ಇಂದು ಹುಬ್ಬಳ್ಳಿಯ ಅಮರಗೋಳದಲ್ಲಿರುವ ಜಗಜ್ಯೋತಿ ಬಸವೇಶ್ವರ ಎಪಿಎಂಸಿಯಲ್ಲಿ ಆಯೋಜಿಸಲಾಗಿದ್ದ ಹುಬ್ಬಳ್ಳಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಹುಬ್ಬಳ್ಳಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಶತಮಾನೋತ್ಸವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಅವರು ಹೇಳಿದರು.

ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಗತವೈಭವ ಮರುಕಳಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಶತಮಾನದಿಂದ ಈ ಸಂಸ್ಥೆಯನ್ನು ಉಳಿಸಿಕೊಂಡು ಬಂದ ಇದ್ದು, ರೈತರ ವಿಶ್ವಾಸವನ್ನು ಉಳಿಸಿಕೊಂಡು ಹೋಗುವ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಮಾಡುವಂತೆ ತಿಳಿಸಿದರು.

ಈ ಪ್ರತಿಷ್ಠಿತ ಸಂಸ್ಥೆ ರೈತರ ಆಸ್ತಿ. ಆ ಪ್ರತಿಷ್ಠೆಯನ್ನು ಮತ್ತು ರೈತ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ವಿಶೇಷ ಕಾಳಜಿ, ಮತ್ತು ಮುತುವರ್ಜಿ ವಹಿಸಬೇಕು ಇದರೊಂದಿಗೆ ನಾನು ಸಹ ಈ ಸಂಸ್ಥೆಯ ಜೊತೆ ಇರುವುದಾಗಿ ಮುಖ್ಯಮಂತ್ರಿಯವರು ತಿಳಿಸಿದರು.

ಒಬ್ಬ ವ್ಯಕ್ತಿ 100 ವರ್ಷ ಉಳಿಯಬಹುದು, ಆದರೆ ಒಂದು ಸಂಸ್ಥೆಯನ್ನು 100 ವರ್ಷ ಉಳಿಸಿಕೊಂಡು ಬರುವುದು ಬಹಳ ಕಷ್ಟ. ಇಂದಿನ ಖಾಸಗೀಕರಣ, ಜಾಗತೀಕರಣ ಹಾಗೂ ಆಧುನೀಕರಣ ನಡುವೆಯೂ ಸಹಕಾರಿ ಸಂಸ್ಥೆಯನ್ನು ಉಳಿಸಿಕೊಂಡು ಬಂದಿರುವುದು ಪರಿಶ್ರಮದ ಪರಿಣಾಮ ಎಂದರು.

ರೈತರ ವಿಷಯ ಬಂದಾಗ, ರೈತರ ಸಮಸ್ಯೆ ವಿಷಯ ಬಂದಾಗ ಬೇರೆಲ್ಲವನ್ನು ಮರೆತು ನಾವು ಒಗ್ಗಟಾಗಿ ಕೆಲಸ ಮಾಡೋಣ ಎಂದರು. ಸಂಸ್ಥೆಯ ಬೆಳೆದರೆ ರೈತರಿಗೆ ಅನುಕೂಲವಾಗುವುದು. ಸಂಸ್ಥೆಯಿಂದ ನಾವು-ನಿವೆಲ್ಲರೂ ಬೆಳೆದಿದ್ದೇವೆ, ರಾಜಕೀಯವಾಗಿಯೂ ಬೆಳೆದಿದ್ದೇವೆ. ಈ ಸಂಸ್ಥೆಯನ್ನು ಬೆಳೆಸಲು ನಾವು-ನೀವು ಮರಳಿ ಏನನ್ನಾದರೂ ನೀಡುವ ಚಿಂತನೆಯನ್ನು ಮಾಡಬೇಕಿದೆ ಎಂದರು.

ಇದು ನನ್ನ ಸಂಸ್ಥೆ ಈ ಸಂಸ್ಥೆಗೆ ಸರ್ಕಾರದಿಂದ ನೀಡಬೇಕಾಗಿರುವ ಸಹಾಯ-ಸಹಕಾರವನ್ನು ಸರ್ಕಾರದಿಂದ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಸಂಸ್ಥೆಯವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

Related posts

ಈಶ್ವರಪ್ಪ ವಿವಾದಾತ್ಮಕ ಹೇಳಿಕೆಗೆ ಪ್ರತಿಭಟನೆ

eNEWS LAND Team

ಅತಿವೃಷ್ಟಿಗಾಗಿ ತುರ್ತು ಸಭೆ : ರೈತ ನೆಮ್ಮದಿಯಿಂದ ಇದ್ದಾಗ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ: ಶಾಸಕ ನಿಂಬಣ್ಣವರ

eNEWS LAND Team

ಹುಬ್ಬಳ್ಳಿ ರೈಲುಗಳು ಸೇವೆಯ ರದ್ಧತಿ

eNewsLand Team