34 C
Hubli
ಮೇ 4, 2024
eNews Land
ಸುದ್ದಿ

ಹುಬ್ಬಳ್ಳಿಲಿ ಬೈಕು ಟಚ್ ಆಗಿದ್ದಕ್ಕೆ ಚಾಕೂ ಚುಚ್ಚಿದ್ನಾ ಉಸ್ಮಾನ್ ಭಾಯ್!!

ಇಎನ್ಎಲ್ ಧಾರವಾಡ: ಹಳೆ ಜಗಳ ಹಿನ್ನೆಲೆಯಲ್ಲಿ ಇಲ್ಲಿನ ಹಳೇ ಹುಬ್ಬಳ್ಳಿ ಬೀರಬಂದ ಓಣಿಯ ಬಳಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಐವರು ಸೇರಿ ಹಲ್ಲೆ ನಡೆಸಿ ಚೂರಿ ಇರಿದು ಕೊಲೆಗೆ ಯತ್ನಿಸಲಾಗಿದೆ.

ಜಾವೀದ್ ಶಬ್ಬೀರಹ್ಮದ್ ಕುಂದಗೋಳ ಗಾಯಗೊಂಡವರು. ಇವರಿಗೆ ಉಸ್ಮಾನ್ ಎಂಬಾತ ಚೂರಿ ಇರಿದ ಬಗ್ಗೆ ದೂರು ದಾಖಲಾಗಿದೆ. ಸೋಹಿಲ್ ಕಾವಸಾ, ಇಸ್ಮಾಯಿಲ್ ಮನಿಯಾರ್, ತಾಜುದ್ದಿನ್ ಎಲ್., ಫಾರೂಕ್ ಸವಣೂರ ಹಲ್ಲೆ ನಡೆಸಿದ ಇತರೆ ಆರೋಪಿಗಳು. ಬೈಕ್ ತಾಗಿದ್ದನ್ನು ನೆಪವಾಗಿಸಿಕೊಂಡ ಆರೋಪಿಗಳು ಹಳೆ ಜಗಳ ತೆಗೆದು ಥಳಿಸಿದ್ದಾರೆ. ಈ ವೇಳೆ ಉಸ್ಮಾನ್ ಚೂರಿಯಿಂದ ಬೆನ್ನಿಗೆ ಇರಿದಿದ್ದಾಾನೆ. ಜಾವೀದ್ ಚೀರಾಡುತ್ತಿದ್ದಂತೆ ಸ್ಥಳೀಯರು ಬಂದು ಗಲಾಟೆ ಬಿಡಿಸಿದ್ದಾರೆ. ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಏಳು ಮಕ್ಕಳ ತಾಯಮ್ಮ ದೇವಿಗೆ ಸಂಕ್ರಾಂತಿ ಸಿಂಗಾರ

eNewsLand Team

ಅಣ್ಣಿಗೇರಿ ಪುರಸಭೆ… ಅಧ್ಯಕ್ಷಗಿರಿ ಮೆಹಬೂಬಿ… ಯಾವ ಪಕ್ಷ? ಇಲ್ಲಿದೆ ಸಂಪೂರ್ಣ ಮಾಹಿತಿ ತಪ್ಪದೇ ನೋಡಿ ಮತ್ತು ಶೇರ್ ಮಾಡಿ

eNEWS LAND Team

ನಮ್ಮಲ್ಲಿ ಹುಟ್ಟಿದ ಜೈನ ಧರ್ಮ ಜಗತ್ತಿಗೆ ಶಾಂತಿ ಸಂದೇಶ ನೀಡುತ್ತಿದೆ: ಡಾ. ಜಿ. ಪರಮೇಶ್ವರ

eNewsLand Team