27 C
Hubli
ಏಪ್ರಿಲ್ 29, 2024
eNews Land
ಅಪರಾಧ ಕೃಷಿ

ಮೆಣಸಿನ ಸಸಿ ಕಿತ್ತು ವಿಕೃತಿ ಮೆರೆದ ದುಷ್ಕರ್ಮಿಗಳು

 

ಅಣ್ಣಿಗೇರಿ:

ಪಟ್ಟಣದ ಮಜ್ಜಿಗುಡ್ಡ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಸಿಗುವ ರೈತ ದೊಡ್ಡಯ್ಯ ಕಾವಯ್ಯ ಹಿರೇಮಠ ಅವರ ಹೊಲದಲ್ಲಿ 5 ಗುಂಟೆಗಿಂತ ಹೆಚ್ಚಿನ ಪ್ರಮಾಣದ ಹೊಲದಲ್ಲಿ ಮೆಣಸಿನಕಾಯಿ ಸಸಿಗಳನ್ನು ಕಿತ್ತು ದುಷ್ಕರ್ಮಿಗಳು ಕಿತ್ತು ವಿಕೃತಿ ಮೆರೆದಿದ್ದಾರೆ.

ಎರಡು ಎಕರೆ 20 ಗುಂಟೆ ಹೊಲದಲ್ಲಿ ಮೆಣಸಿನಕಾಯಿ ಸಸಿಗಳನ್ನು ಕಿತ್ತೆಸೆದು ದುಷ್ಕರ್ಮಿಗಳು 1 ಕ್ವಿಂಟಲ್ ನಷ್ಟು ಬೆಳೆ ನಾಶ ಪಡಿಸಿದ್ದಾರೆ.

ಸಂಕಷ್ಟದಲ್ಲಿರುವ ರೈತರು ಸಾಲ ಮಾಡಿ ಬೆಳೆಸಿದ ಬೆಳೆ ಕೈಗೆ ಬರುವ ಹೊತ್ತಿನಲ್ಲಿ ದುಷ್ಕರ್ಮಿಗಳು ಈ ರೀತಿ ಬೆಳೆ ನಾಶ ಪಡಿಸುತ್ತಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.

ಈ ತಕ್ಷಣವೇ ಅಣ್ಣಿಗೇರಿ ಪೊಲೀಸ್ ಠಾಣಾಧಿಕಾರಿಗಳು ಜಾಗೃತಿವಹಿಸಿ ರೈತರ ಹೊಲದಲ್ಲಿ ಬೆಳೆ ನಾಶಪಡಿಸುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಹಾಗೂ ತಪ್ಪಿತಸ್ಥರಿಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಟ್ಟಣದ ರೈತರು ಆಗ್ರಹಿಸಿದ್ದಾರೆ.

 

 

Related posts

ಸಾಧಿಸುವ ಛಲ, ದೃಢವಾದ ಸಂಕಲ್ಪ, ಸತತ ಪ್ರಯತ್ನ, ಪರಿಶ್ರಮಕ್ಕೆ ಯಶಸ್ಸು ನಿಶ್ಚಿತ

eNEWS LAND Team

ನವಲಗುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿರುವ ಲಾರಿಗೆ ಬೆಂಕಿ.

eNEWS LAND Team

ರೈತರಿಗೆ ಆಸರೆಯಾದ ಪಿಎಂ ಫಸಲ ಬೀಮಾ ಯೋಜನೆ: ಕಟ್ಟೇಗೌಡರ

eNEWS LAND Team