ಅಣ್ಣಿಗೇರಿ:
ಪಟ್ಟಣದ ಮಜ್ಜಿಗುಡ್ಡ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಸಿಗುವ ರೈತ ದೊಡ್ಡಯ್ಯ ಕಾವಯ್ಯ ಹಿರೇಮಠ ಅವರ ಹೊಲದಲ್ಲಿ 5 ಗುಂಟೆಗಿಂತ ಹೆಚ್ಚಿನ ಪ್ರಮಾಣದ ಹೊಲದಲ್ಲಿ ಮೆಣಸಿನಕಾಯಿ ಸಸಿಗಳನ್ನು ಕಿತ್ತು ದುಷ್ಕರ್ಮಿಗಳು ಕಿತ್ತು ವಿಕೃತಿ ಮೆರೆದಿದ್ದಾರೆ.
ಎರಡು ಎಕರೆ 20 ಗುಂಟೆ ಹೊಲದಲ್ಲಿ ಮೆಣಸಿನಕಾಯಿ ಸಸಿಗಳನ್ನು ಕಿತ್ತೆಸೆದು ದುಷ್ಕರ್ಮಿಗಳು 1 ಕ್ವಿಂಟಲ್ ನಷ್ಟು ಬೆಳೆ ನಾಶ ಪಡಿಸಿದ್ದಾರೆ.
ಸಂಕಷ್ಟದಲ್ಲಿರುವ ರೈತರು ಸಾಲ ಮಾಡಿ ಬೆಳೆಸಿದ ಬೆಳೆ ಕೈಗೆ ಬರುವ ಹೊತ್ತಿನಲ್ಲಿ ದುಷ್ಕರ್ಮಿಗಳು ಈ ರೀತಿ ಬೆಳೆ ನಾಶ ಪಡಿಸುತ್ತಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.
ಈ ತಕ್ಷಣವೇ ಅಣ್ಣಿಗೇರಿ ಪೊಲೀಸ್ ಠಾಣಾಧಿಕಾರಿಗಳು ಜಾಗೃತಿವಹಿಸಿ ರೈತರ ಹೊಲದಲ್ಲಿ ಬೆಳೆ ನಾಶಪಡಿಸುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಹಾಗೂ ತಪ್ಪಿತಸ್ಥರಿಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಟ್ಟಣದ ರೈತರು ಆಗ್ರಹಿಸಿದ್ದಾರೆ.