27.9 C
Hubli
ಮೇ 17, 2024
eNews Land
ಸುದ್ದಿ

ಗಾಂಧೀಜಿಯವರ ಜೀವನ ಶೈಲಿ ನಮ್ಮೆಲ್ಲರಿಗೂ ಮಾದರಿ: ವರ್ಧಮಾನಗೌಡ ಹಿರೇಗೌಡರ

ಇಎನ್ಎಲ್ ನವಲಗುಂದ: ಇಂದಿನ ಪೀಳಿಗೆಗೆ ಮಹಾತ್ಮ ಗಾಂಧೀಜಿಯವರ ಧ್ಯೇಯೋದ್ದೇಶಗಳ ಪರಿಚಯ ಅವರು ನಡೆದು ಬಂದ ದಾರಿ ಎಲ್ಲರಿಗೂ ಮಾದರಿಯಾಗಬೇಕೆಂದು ನವಲಗುಂದ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ ಹೇಳಿದರು.

ಅವರು ಪಟ್ಟಣದ ಕಾಂಗ್ರೆಸ್ ಭವನದಲ್ಲಿ ತಾಲೂಕಾ ಕಾಂಗ್ರೆಸ್ ಸಮಿತಿಯಿಂದ ಮಹಾತ್ಮ ಗಾಂಧೀಜಿಯವರು ಹಾಗೂ ಲಾಲಬಹುದ್ದೂರ ಶಾಸ್ತ್ರೀಜಿ ಅವರ ಜನ್ಮದಿನಾಚರಣೆಯನ್ನು ಆಚರಿಸಿ ಮಾತನಾಡಿದರು.
ಗಾಂಧೀಜಿಯವರು ಹಾಗೂ ಲಾಲಬಹದ್ದೂರ ಶಾಸ್ತ್ರೀಜಿಯವರು ದೇಶಕ್ಕೆ ಎರಡು ಕಣ್ಣುಗಳಿದ್ದಂತೆ ಅಂತಹ ಮಹಾನ್ ವ್ಯಕ್ತಿಗಳು ದೇಶಕ್ಕಾಗಿ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಮೋದಿನಸಾಬ ಶಿರೂರ, ಜೀವನ ಪವಾರ, ಪುರಸಭೆ ಸದಸ್ಯರಾದ ಪ್ರಕಾಶ ಶಿಗ್ಲಿ, ಹುಸೇನಬೀ ಧಾರವಾಡ, ಶಿವಾನಂದ ತಡಸಿ, ಸುಲೇಮಾನ ನಾಶಿಪುಡಿ, ಕಿಷ್ಟಪ್ಪ ಕುರಹಟ್ಟಿ, ಸಿದ್ದು ಪಾಟೀಲ, ಕಿರಣ ಉಳ್ಳಿಕೇರಿ, ಕರಿಯಪ್ಪ ತಳವಾರ ಇತರರು ಇದ್ದರು.

Related posts

ಕಾರವಾರದ ಪ್ರಾಧ್ಯಾಪಕರೊಬ್ಬರು ಪುನೀತ್ ಮಣ್ಣಿನ ಮೂರ್ತಿ ಮಾಡಿದ್ದಾರೆ

eNEWS LAND Team

ಅವಶ್ಯಕತೆ ಅನುಸಾರವಾಗಿ ಯೋಜನಾ ವರದಿ ತಯಾರಿಸಿ: ಎನ್.ಎಫ್.ಕಟ್ಟೆಗೌಡರ

eNEWS LAND Team

ವಾಜಪೇಯಿ ಜನ್ಮದಿನ; ರುದ್ರಭೂಮಿ ಶುಚಿಗೊಳಿಸಿ ಬಣ್ಣ ಬಳಿದ ಸಚಿವ ಜೋಶಿ

eNewsLand Team