25 C
Hubli
ಮೇ 10, 2024
eNews Land
ಸಣ್ಣ ಸುದ್ದಿ

ಕಲಘಟಗಿ: ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪ್ರಕಾಶ ದೂಪದ ಆಯ್ಕೆ

ಇಎನ್ಎಲ್ ಕಲಘಟಗಿ: ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವಿಸ್ತಾರ ನ್ಯೂಸ್ ವರದಿಗಾರ ಪ್ರಕಾಶ ದೂಪದ ಅವಿರೋಧ ಆಯ್ಕೆಯಾಗಿದ್ದಾರೆ.
ಉಪ್ಪಾಧ್ಯಕ್ಷರಾಗಿ ಭಾರತ ವೈಭವ ಪತ್ರಿಕೆ ವರದಿಗಾರ ಶಶಿಕುಮಾರ ಕಟ್ಟಿಮನಿ, ಕಾರ್ಯದರ್ಶಿಯಾಗಿ ವಿಶ್ವವಾಣಿ ಪತ್ರಿಕೆ ವರದಿಗಾರ ಪ್ರಭುಲಿಂಗ ರಂಗಾಪುರ, ಗೌರವ ಕಾರ್ಯದರ್ಶಿಯಾಗಿ ಸಂಜೆ ದರ್ಪನ ಪತ್ರಿಕೆ ಹಾಗೂ ಹಿರಿಯ ವರದಿಗಾರ ರವಿ ಬಡಿಗೇರ, ಸಂಘಟನಾ ಕಾರ್ಯದರ್ಶಿಯಾಗಿ ವಿಜಯವಾಣಿ ಪತ್ರಿಕೆ ವರದಿಗಾರ ವಿರೇಶ ಹಾರೂಗೇರಿ, ಖಜಾಂಚಿಯಾಗಿ ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರ ಪ್ರಕಾಶ ಲಮಾಣಿ ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ಸುಭಾಸ ಸುಣಗಾರ ಆಯ್ಕೆಯಾಗಿದ್ದಾರೆ.
ಈ ವೇಳೆ ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ಪ್ರಲ್ಹಾದಗೌಡ್ರ ಗೊಲ್ಲಗೌಡ್ರ, ಕನ್ನಡ ಪ್ರಭ ವರದಿಗಾರ ಹಾಗೂ ಕಾಯಕ ವಾಣಿ ಪತ್ರಿಕೆ ಸಂಪಾದಕ ರಮೇಶ ಸೋಲಾರಗೊಪ್ಪ, ಹುಬ್ಬಳ್ಳಿ ಸಂಜೆ ಪತ್ರಿಕೆ ವರದಿಗಾರ ಉಮೇಶ ಜೋಶಿ, ಪಬ್ಲಿಕ್ ನೆಕ್ಸ್ಟ್ ವರದಿಗಾರ ಉದಯಗೌಡರ, ಪ್ರಜಾವಾಣಿ ಪತ್ರಿಕೆ ವರದಿಗಾರ ಕಲ್ಲಪ್ಪ ಮಿರ್ಜಿ ಇದ್ದರು.

Related posts

ಕಲಘಟಗಿ: ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ

eNEWS LAND Team

15 ರಿಂದ 18 ವರ್ಷದವರಿಗೆ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ನಾಳೆ ಚಾಲನೆ

eNEWS LAND Team

ಗುರುವಂದನಾ ಕಾರ್ಯಕ್ರಮ

eNEWS LAND Team