ಇಎನ್ಎಲ್ ಹುಬ್ಬಳ್ಳಿ: ಕರ್ನಾಟಕ ರಾಜ್ಯ ವಿಧಾನ ಪರಿಷತ್ಗೆ ನೂತನವಾಗಿ ಅವಿರೋಧ ಆಯ್ಕೆಯಾದ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರನ್ನು ಜೂ.24ರಂದು ಅವರ ಗೃಹ ಕಚೇರಿಯಲ್ಲಿ ಎಪಿಎಮ್’ಸಿ. ವ್ಯಾಪಾರಸ್ಥರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ ಮತ್ತು ಗೌರವ ಕಾರ್ಯದರ್ಶಿ ರಾಜಕಿರಣ ಮೆಣಸಿನಕಾಯಿ ಇವರ ನೇತೃತ್ವದಲ್ಲಿ ಜಗದೀಶ್ ಶೆಟ್ಟರನ್ನು ಭೇಟಿಯಾಗಿ ಸನ್ಮಾನಿಸಲಾಯಿತು.
ಈ ವೇಳೆ ಸಹಗೌರವ ಕಾರ್ಯದರ್ಶಿ ಚಂದ್ರಶೇಖರ ಪೂಜಾರ, ಸದಸ್ಯರಾದ ಅಶೋಕ ಬಾಳಿಕಾಯಿ, ಬಸವಂತಪ್ಪ ಪೂಜಾರ, ಶಿವಯೋಗಿ ಹೊಸಕಟ್ಟಿ, ಶಿವಲಿಂಗಪ್ಪ ಜಿಗಜಿನ್ನಿ, ಈಶ್ವರಪ್ಪ ಹೆಬಸೂರ, ನಾರಾಯಣ ಭಂಡಾರಕರ, ನಾಗರಾಜ ಮರದ, ರುದ್ರಪ್ಪ ಬೆಟಗೇರಿ, ಸಿದ್ದು ಅಳಗವಾಡಿ, ವಿನೋದ ತಲ್ಲೂರ, ಶಿವನಗೌಡ ಪಾಟೀಲ, ಬಸವರಾಜ ಬೆಲ್ಲದ ಮುಂತಾದವರು ಇದ್ದರು.