39 C
Hubli
ಏಪ್ರಿಲ್ 30, 2024
eNews Land
ಸಣ್ಣ ಸುದ್ದಿ

ಅಣ್ಣಿಗೇರಿ ಶಾರದಾ ಪಬ್ಲಿಕ್ ಸ್ಕೂಲ್‌ನಲ್ಲಿ  ಶಾರದಾ ಉತ್ಸವ

ಇದನ್ನೂ ಓದಿ:ಹಿರಿಯ ರಂಗಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ನಿಧನ : ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಕಂಬನಿ

ಇಎನ್ಎಲ್ ಅಣ್ಣಿಗೇರಿ: ಇಂದು ಪಟ್ಟಣದ ಶಾರದಾ ಪಬ್ಲಿಕ್ ಸ್ಕೂಲ್‌ನಲ್ಲಿ ಶಾರದಾ ಉತ್ಸವ ಮಕ್ಕಳಿಂದ ಸಾಂಸ್ಕೃತಿಕ ಸಂಭ್ರಮ ಜರುಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶೈಕ್ಷಣಿಕ ನಿರ್ದೇಶಕಿ ಗ್ರೇಸ್ ನೋರೋನ್ಸಾ ಹೇಳಿದರು.
ಅಣ್ಣಿಗೇರಿ ವೆಂಕಟೇಶ್ವರ ಎಜ್ಯುಕೇಶನ್ ಟ್ರಸ್ಟ್ ನಿರ್ದೇಶಕ ವಿ.ವಿ.ಕೋನರಡ್ಡಿ, ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಚೇತನಾ ಬಿಸಿನೆಸ್ ಸ್ಕೂಲ್ ಡಾ.ವಿಶ್ವನಾಥ ಕೊರವಿ, ನರೇಗಲ್ ಎಸ್.ಎ.ಪಿ. ಯು. ಡಾ.ವಾಯ್.ಸಿ.ಪಾಟೀಲ ಉಪಸ್ಥಿತರಿರುವರು.
ವಿಶೇಷ ಅತಿಥಿಗಳಾಗಿ ಚಂದನ ಟಿವಿಯ ‘ಮರೆಯದ ಮಾಣಿಕ್ಯ” ಕಾರ್ಯಕ್ರಮ ಮುಖ್ಯಸ್ಥ ಗುರುರಾಜ ಕೆ. ಗಾಯಕ ವೆಂಕಟೇಶಮೂರ್ತಿ ಶಿರೂರ, ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ ಧಾರವಾಹಿಯ ಕು.ಶಾರ್ವರಿ ವಿ. ಭಾಗವಹಿಸುವರು. ಮಕ್ಕಳಿಂದ ಸಾಂಸ್ಕೃತಿಕ ಸಂಭ್ರಮ ಹಾಗೂ ಸಂಗೀತ ಸಂಜೆ ಜರುಗಲಿದ್ದು, ಪಟ್ಟಣ ಹಾಗೂ ಸುತ್ತಮುತ್ತಲಿನ ಸ್ಥಳೀಯರು ಪಾಲ್ಗೊಳ್ಳಬೇಕೆಂದು ವಿನಂತಿಸಿದರು. ಈ ಸಂದರ್ಭದಲ್ಲಿ ವೆಂಕಟೇಶ್ವರ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಸಂಜೀವರಡ್ಡಿ ಅಮಡ್ಲ, ಕಾರ್ಯದರ್ಶಿ ಆನಂದ ಕಲಾಲ, ನಿರ್ದೇಶಕ ಸಂಭಾಜಿ ಕಲಾಲ, ಶ್ರೀನಿವಾಸ ಮಂಕಣಿ, ವಾಸಪ್ಪ ಕೋನರಡ್ಡಿ, ನಾಗರಾಜ ಬಡಿಗೇರ ಉಪಸ್ಥಿತರಿದ್ದರು.

ಇದನ್ನೂ ಓದಿ: ಕ್ರಿಕೆಟ್ ಬೆಟ್ಟಿಂಗ್; ಇಬ್ಬರು ಗಡಿಪಾರು!!

Related posts

ಅಣ್ಣಿಗೇರಿಯಲ್ಲಿ ಕನ್ನಡ ಗೀತ ಗಾಯನ

eNEWS LAND Team

ನರೇಗಾ ಕಾಮಗಾರಿ ಉತ್ತಮ: ಗುರುಲಿಂಗಸ್ವಾಮಿ

eNEWS LAND Team

ಅಣ್ಣಿಗೇರಿ: ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿಜೀ ಜನ್ಮದಿನ

eNEWS LAND Team