ಇಎನ್ಎಲ್ ಚಿತ್ರದುರ್ಗ :
ಚಿತ್ರದುರ್ಗದ ಮುರುಘಾಮಠ ಕೊಡಮಾಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ನಟ ಪುನೀತ್ ರಾಜ್ಕುಮಾರಗೆ ಮರಣೋತ್ತರವಾಗಿ ಘೋಷಿಸಲಾಯಿತು.
ಮುರುಘಾಶ್ರೀ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಪವರ್ ಸ್ಟಾರ್ ಅಪ್ಪು ಗೆ ಬಸವಶ್ರೀ ಪ್ರಶಸ್ತಿ ಪ್ರಕಟಿಸಿದರು.
ಐದು ಲಕ್ಷ ರೂ. ನಗದು ಒಳಗೊಂಡಿರುವ ಬಸವಶ್ರೀ ಪ್ರಶಸ್ತಿಯನ್ನು ಬರುವ ಬಸವ ಜಯಂತಿ ದಿನ ಪ್ರದಾನ ಮಾಡಲಾಗುತ್ತದೆ.
ಮುರುಘಾಮಠದ ಅನುಭವ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ಪುನೀತ್ ಪತ್ನಿ ಅಶ್ವಿನಿ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಲಾಗುವುದು. ಸಹೋದರ ಶಿವರಾಜಕುಮಾರ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುವುದು. ನ.10 ರಂದು ಪುನೀತ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಲಾಗುವುದು ಮುರುಘಾಶ್ರೀಗಳು ಎಂದರು.