27.3 C
Hubli
ಮೇ 20, 2024
eNews Land
ಸುದ್ದಿ

ಬೆಂಗಳೂರು-ಹುಬ್ಬಳ್ಳಿ ವಂದೇ ಭಾರತ ರೈಲು ಸೇವೆಗೆ ಸಂತಸ: ಪಿ.ಕೃಷ್ಣಮೂರ್ತಿ

ಇಎನ್ಎಲ್ ಹುಬ್ಬಳ್ಳಿ: ಬೆಂಗಳೂರು ಮತ್ತು ಹುಬ್ಬಳ್ಳಿ ನಡುವಿನ Semi Highspeed Vande Bharat ರೈಲು ಸೇವೆಗೆ ಪ್ರಧಾನಿ ಮೋದಿಯವರಿಂದ ಚಾಲನೆ ಸಿಗುತ್ತಿರುವುದು ಸಂತೋಷದ ವಿಷಯವಾಗಿದೆ.

ಇದರಿಂದ ಕರ್ನಾಟಕವು ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯನ್ನು ಸಾಧಿಸಲು ಒಂದು ಪ್ರಗತಿಪರ ಹೆಜ್ಜೆಯಾಗಿ ಮಾರ್ಪಡುವುದರಲ್ಲಿ ಸಂದೇಹವಿಲ್ಲ, ಇದೇ ರೀತಿ ಕರ್ನಾಟಕಕ್ಕೆ ಬೆಂಗಳೂರು- ವಿಜಾಪುರ, ಬೆಂಗಳೂರು-ಗೋವಾ, ಬೆಂಗಳೂರು -ಕಾರವಾರ, ಬೆಂಗಳೂರು-ಬಳ್ಳಾರಿ ಹೀಗೆ ಹಲವು ಮಾರ್ಗಗಳಲ್ಲಿ Vande Bharat ರೈಲು ಸೇವೆಗಳಿಗೆ ಚಾಲನೆ ಸಿಕ್ಕರೆ ಕರ್ನಾಟಕವು ಒಂದು ಮಾದರಿ ರಾಜ್ಯವಾಗಿ ಬೆಳವಣಿಗೆ ಹೊಂದುವುದು ಶತಸಿದ್ಧ, ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಕೆಲಸ ಮಾಡುವುದು  ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ. ಈ ವಂದೇ ಭಾರತ ರೈಲು ಬೆಂಗಳೂರು ಮತ್ತು ಹುಬ್ಬಳ್ಳಿ ನಡುವಿನ ಅಂತರವನ್ನು ಕಡಿಮೆ ಮಾಡುವುದಲ್ಲದೆ ಎರಡು ಮಹಾನಗರಗಳ ಜನರನ್ನು ಸಂಪರ್ಕಿಸುವ ಕೆಲಸ ಮಾಡುತ್ತದೆ ಎಂದು ಬೆಂಗಳೂರು ನೈರುತ್ಯ ರೈಲ್ವೆ ವಲಯ ಝೆಡ್ಆರ್’ಯುಸಿಸಿ ಸದಸ್ಯ (BANGALORE SOUTH WESTERN RAILWAY ZONEL ZRUCC MEMBER) ಪಿ.ಕೃಷ್ಣಮೂರ್ತಿ ಹರ್ಷ ವ್ಯಕ್ತಪಡಿಸಿದ್ದಾರೆ.

Related posts

ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ: ಸಿಎಂ ಬೊಮ್ಮಾಯಿ

eNEWS LAND Team

ಸೈಕಲ್ ಏರಿದ ಡಿಸಿ, ಕಮಿಷನರ್’ರಿಂದ ಧಾರವಾಡ ಸಿಟಿ ರೌಂಡ್ಸ್ 

eNewsLand Team

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಮುಖ್ಯಮಂತ್ರಿ ಬೊಮ್ಮಾಯಿ

eNewsLand Team