ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿ ವಿಭಾಗದ ವಾರ್ಡ ನಂ. 39, 41 ಹಾಗೂ 46 ರಲ್ಲಿ ಬರುವ ವಿಜಯನಗರ, ರಾಜನಗರ, ಶಿರಡಿನಗರ, ಸಬ್ ಜೈಲ್ ರೋಡ, ಆದರ್ಶನಗರ, ಅಶೋಕ ನಗರ, ಮಯೂರಿ ಎಸ್ಟೇಟ್, ದೇಶಪಾಂಡೆ ಲೇಔಟ್ ಮುಂತಾದ ಪ್ರದೇಶಗಳಲ್ಲಿ ರಸ್ತೆ ಹಾಗೂ ತೆರೆದ ಚರಂಡಿಯ ಕಾಮಗಾರಿಗಳು ಪ್ರಗತಿಯಲ್ಲಿದ್ದು, ತೆರೆದ ಚರಂಡಿ ಮಧ್ಯದಲ್ಲಿನ ಟ್ರಾನ್ಸ್ಫಾರ್ಮರ್ ಹಾಗೂ ಬೀದಿ ದೀಪದ ಕಂಬಗಳನ್ನು ಹೆಸ್ಕಾಂ ಹಾಗೂ ಪಾಲಿಕೆಯ ವತಿಯಿಂದ ಸ್ಥಳಾಂತರಿಸುವ ಕಾಮಗಾರಿಯನ್ನು ಜೂನ್ 15 ರಿಂದ 30 ರವರೆಗೆ ಕೈಗೊಳ್ಳಲಾಗುತ್ತಿದೆ.
ಈ ದಿನಗಳಂದು ಕೆಲವೊಂದು ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಬಿ. ಗೋಪಾಲಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.