ಟೀ ವಿತ್ ಪೌರ ಕಾರ್ಮಿಕ್ಸ್
ಇಎನ್ಎಲ್ ಧಾರವಾಡ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ ಹಾಗೂ ಜಂಟಿ ಆಯುಕ್ತ ಮಾಧವ ಗಿತ್ತೆ ಅವರು ಇಂದು ನಸುಕಿನ ಜಾವ ಸಿಟಿ ರೌಂಡ್ಸ್ ಹಾಕಿ, ಸ್ವಚ್ಛತಾ ಕಾರ್ಯ ಪರಿಶೀಲಿಸಿದರು.
ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದ ಪೌರ ಕಾರ್ಮಿಕರ ಜೊತೆಗೆ ಚಹಾ ಸೇವಿಸುವುದರ ಜೊತೆಗೆ ಅವರ ಕುಂದು ಕೊರತೆ ಆಲಿಸಿದರು.
ಆಜಾದಾ ಪಾರ್ಕ್, ಸೂಪರ್ ಮಾರ್ಕೆಟ್ ಭೇಟಿ ನೀಡಿದರು.
ಸ್ವಚ್ಛ ಸರ್ವೇಕಣಾ ಅಭಿಯಾನ ಯಶಸ್ವಿಗೊಳಿಸಲು ಅಧಿಕಾರಿಗಳು ಸ್ವತಃ ಸೈಕಲ್ ಏರಿ ನಗರ ಸುತ್ತಾಡಿ ಪರಶೀಲಿಸುದರು.
ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.