26 C
Hubli
ಮೇ 18, 2024
eNews Land
ರಾಜಕೀಯ

ಕಾಂಗ್ರೆಸ್’ನ  ನಕಲಿ  ಬಣ್ಣ ಈಗ ರಾಜ್ಯದ ಜನತೆಯ ಮುಂದೆ  ಬಯಲಾಗಿದೆ: ಪೃಥ್ವಿ ರೆಡ್ಡಿ

ಇಎನ್ಎಲ್ ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಷರತ್ತುಗಳ ವಿರುದ್ಧ ಆಮ್ ಆದ್ಮಿ ಪಕ್ಷ  ಸ್ವಾತಂತ್ರ ಉದ್ಯಾನವನದಲ್ಲಿ ನಡೆಸಿದ ಬೃಹತ್   ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಸುದ್ದಿಗಾರರೊಂದಿಗೆ  ಮಾತನಾಡುತ್ತಾ ” ಕಾಂಗ್ರೆಸ್ ನ 5 ಗ್ಯಾರೆಂಟಿಗಳ ಶರತ್ತು ಬದ್ಧ ಯೋಜನೆಗಳಿಂದಾಗಿ ಅವರ ನಕಲಿ ನಿಜಬಣ್ಣ ರಾಜ್ಯದ ಜನತೆಯ ಮುಂದೆ ಬಟಾ ಬಯಲಾಗಿದೆ. ಆಮ್ ಆದ್ಮಿ ಪಕ್ಷದ ದೆಹಲಿ ಮತ್ತು ಪಂಜಾಬ್ ಮಾದರಿಯನ್ನು ನಕಲು ಮಾಡಿ ನೀಡಿದ ಭರವಸೆಗಳನ್ನು ನೀಡಿ  ವಾಮ ಮಾರ್ಗದಿಂದ  ಅಧಿಕಾರಕ್ಕೆ ಬಂದಿದೆ.  ಕಾಂಗ್ರೆಸ್ ಪಕ್ಷ ತಾನು  ನೀಡಿದ  ಭರವಸೆಗಳನ್ನು ಈಡೇರಿಸಲಾಗದೆ ನಾನಾ ಶರತ್ತುಗಳನ್ನು ವಿಧಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಸುಳ್ಳು ಹೇಳುತ್ತಾ  ರಾಜ್ಯದ ಜನತೆಗೆ ಮಹಾ ಮೋಸವನ್ನು ಮಾಡುತ್ತಿದ್ದಾರೆಂದು”  ಪೃಥ್ವಿ ರೆಡ್ಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

” ಸರ್ಕಾರದ ಗೃಹಜೋತಿ, ಗೃಹಲಕ್ಷ್ಮಿ ಹಾಗೂ ಇನ್ನಿತರ ಗ್ಯಾರೆಂಟಿ ಗಳು  ಬಡವರನ್ನು ಮತ್ತಷ್ಟು  ಬಡವರನ್ನಾಗಿಸುವ  ಕಾರ್ಯಕ್ರಮಗಳೇ ಹೊರತು ಮತ್ತೇನು ಅಲ್ಲ. ನಾವು ದೆಹಲಿಯಲ್ಲಿ  ಹಾಗೂ ಪಂಜಾಬ್ ರಾಜ್ಯಗಳಲ್ಲಿ  ಅತ್ಯಂತ ವೈಜ್ಞಾನಿಕ ವಾಗಿ ಈ ಎಲ್ಲಾ ಗ್ಯಾರಂಟಿಗಳನ್ನು  ಈಡೇರಿಸುತಿದ್ದೇವೆ. ನಮ್ಮ ಶಿಕ್ಷಣ ಹಾಗೂ ಆರೋಗ್ಯಕ್ರಾಂತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾದರಿ ಆಗಿದೆ. ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಸರ್ಕಾರಿ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಲೇ ಇಲ್ಲ, ಸರ್ಕಾರದ ಮಂತ್ರಿಗಳಿಗೆ ಅವರ ಗ್ಯಾರೆಂಟಿಗಳ ಬಗ್ಗೆ ಅವರಿಗೆ ಗ್ಯಾರಂಟಿ ಇಲ್ಲ. ಪ್ರತಿಯೊಬ್ಬರು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ ಅತ್ಯಂತ ಗೊಂದಲವನ್ನು ಉಂಟು ಮಾಡುತ್ತಿರುವುದು  ನಿಜಕ್ಕೂ ನಾಚಿಕೆಗೇಡಿನ ಸಂಗತಿ” ಎಂದು ಪೃಥ್ವಿ ರೆಡ್ಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪಕ್ಷದ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಪ್ರತಿಭಟನೆಯಲ್ಲಿ ಭಾಗವಹಿಸಿ    ” ಇಂದು ಕೇವಲ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಮಾಡಿದ್ದೇವೆ, ಸರ್ಕಾರ ಇದೇ ರೀತಿಯ ಹೋಗಲಾಡಿತನವನ್ನು  ಪ್ರದರ್ಶಿಸಿದಲ್ಲಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ” ಎಂದು ಎಚ್ಚರಿಸಿದರು

ಪ್ರತಿಭಟನೆಯಲ್ಲಿ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ,  ಉಷಾ ಮೋಹನ್, ಜಗದೀಶ್ ಚಂದ್ರ, ಸೀತಾರಾಮ್ ಗುಂಡಪ್ಪ, ಗೋಪಾಲ್, ರಾಜಶೇಖರ್ ದೊಡ್ಡಣ್ಣ, ಉಮೇಶ್ ಪಿಳ್ಳೆ ಗೌಡ, ಗೋಪಿನಾಥ್, ಶಶಿಕುಮಾರ್ ಆರಾಧ್ಯ, ಮಹಾಲಕ್ಷ್ಮಿ, ಪುಷ್ಪ ಕೇಶವ್  ಸೇರಿದಂತೆ ನೂರಾರು ಜನ ಕಾರ್ಯಕರ್ತರುಗಳು ಭಾಗವಹಿಸಿದ್ದರು.

Related posts

ಚುನಾವಣೆಯಲ್ಲಿ ಬಿಜೆಪಿಗೇ ಮತ್ತೆ ಅಧಿಕಾರ: ಶೋಭಾ ಕರಂದ್ಲಾಜೆ

eNEWS LAND Team

ವಾಯವ್ಯ ಪದವಿಧರ, ಶಿಕ್ಷಕರ ಮತಕ್ಷೇತ್ರ : ಮತದಾರರ ಪಟ್ಟಿ ತಯಾರಿಕೆ ಪದವಿಧರ 22332, ಶಿಕ್ಷಕರ ಮತಕ್ಷೇತ್ರಕ್ಕೆ 3697 ಅರ್ಜಿ ಸ್ವೀಕೃತಿ

eNewsLand Team

ರಾಷ್ಟ್ರೀಯ ನಾಯಕರ ಪ್ರವಾಸದ ಕುರಿತು ಚರ್ಚೆ: ಸಿಎಂ ಬೊಮ್ಮಾಯಿ

eNEWS LAND Team