37 C
Hubli
ಮೇ 5, 2024
eNews Land
ಜಿಲ್ಲೆ ಸುದ್ದಿ

ಜನಸಂಖ್ಯೆ ನಿಯಂತ್ರಣ ಎಲ್ಲರ ಹೊಣೆ: ತಹಸೀಲ್ದಾರ ಅಮಾಸಿ

ಇಎನ್ಎಲ್ ಅಣ್ಣಿಗೇರಿ: ಜನಸಂಖ್ಯೆ ನಿಯಂತ್ರಣಕ್ಕೆ ಎಲ್ಲರ ಜವಾಬ್ದಾರಿ ಮುಖ್ಯ ಎಂದು ತಹಸೀಲ್ದಾರ ಮಂಜುನಾಥ ಅಮಾಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಎಂ.ಬಿ.ಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಂಯೋಗದಲ್ಲಿ ಎನ್.ಎಸ್.ವಿ. ಪಾಕ್ಷಿಕ-2021ರ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರ್.ವಿ.ಕುಪ್ತನ್ ಮಾತನಾಡಿ, ಸಂತಾನಹರಣ ಶಸ್ತ್ರಚಿಕಿತ್ಸೆ ಎಂದರೆ ಪುರುಷರು ಬಲಹೀನರಾಗುತ್ತಾರೆ ಎಂಬುದು ಪೂರ್ವಗ್ರಹ ಪೀಡಿತ. ಪುರುಷರನ್ನು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳಲು ಪ್ರೇರೆಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಿ.ಎನ್.ಹೊಸಮನಿ ಮಾತನಾಡಿ, ಸಂತಾನ ಶಸ್ತ್ರ ಚಿಕಿತ್ಸೆ ಕುರಿತು ಉದ್ದೇಶ ಗುರಿಗಳನ್ನು ಅರಿತು ಸಾಗಬೇಕಿದೆ ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಶೋಭಾ ಕುಲಕರ್ಣಿ ಎ.ಕೆ.ಪತ್ತಾರ, ಎಮ್.ಎ. ತಹಸೀಲ್ದಾರ, ಎಂ.ಎಂ.ಅಳಗವಾಡಿ, ಸುಭಾಸ ಮಂಗಳಿ ಭಾಗವಹಿಸಿದ್ದರು.

ಕಾಲೇಜಿನ, ರೆಡ್ ಕ್ರಾಸ್ ಘಟಕದ ಸುಲೇಶಾ ಬಿ. ಬೆಳಗಾಂ. ವಿಜಯಲಕ್ಷ್ಮಿ ಪಾಟೀಲ, ಎಸ್.ಎಸ್.ಸೂಡಿ, ಕೀರ್ತಿ ಕಳ್ಳೇರ, ಡಾ ಎ.ಸಿ.ವಾಲಿ, ವೈ.ಐ.ಚವ್ಹಾಣ, ಎಸ್.ವಿ.ಲೋಣಕರ, ಉಮಾದೇವಿ ಕಣವಿ, ಜಿ.ಜಿ.ಹಿರೇಮಠ, ಅಧ್ಯಾಪಕರ ವೃಂದ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.

Related posts

ಪಶ್ಚಿಮ ಶಿಕ್ಷಕರ ಕ್ಷೇತ್ರ ಮತದಾರರ ನೋಂದಣಿ ನವೆಂಬರ್ 6 ರವರೆಗೆ ಅವಕಾಶ

eNEWS LAND Team

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ಬೆಳಗಾವಿ ಅಧಿವೇಶನ : ಸಿಎಂ

eNEWS LAND Team

ಧಾರವಾಡ ಜಿಲ್ಲೆಯ ವನಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಗ್ರಾಮ  ವಾಸ್ತವ್ಯ

eNEWS LAND Team