29.7 C
Hubli
ಮೇ 12, 2024
eNews Land
ಸಣ್ಣ ಸುದ್ದಿ

ಖೊಟ್ಟಿ ಜಾತಿ ಪ್ರಮಾಣಪತ್ರ ಪಡೆಯುವವರ ಮೇಲೆ ಕ್ರಮ ತೆಗೆದುಕೊಳ್ಳಿ: ಶಿವು ಪೂಜಾರ

ಇಎನ್ಎಲ್ ನವಲಗುಂದ: ಖೊಟ್ಟಿ ಜಾತಿ ಪ್ರಮಾಣ ಪತ್ರವನ್ನು ಪಡೆಯುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಿ ಅವುಗಳನ್ನು ರದ್ದುಗೊಳಿಸಬೇಕೆಂದು ಯುವ ಕ್ರಾಂತಿ ಕರ್ನಾಟಕ ಸಂಘಟನೆ ಮಂಗಳವಾರ ತಹಶೀಲ್ದಾರ ಕಾರ್ಯಾಲಯದ ಮುಂದೆ ಧರಣೆ ಕುಳಿತು ಪ್ರತಿಭಟಿಸಿ ಅಕ್ರೋಶ ವ್ಯಕ್ತಪಡಿಸಿದರು.

ಯುವ ಕ್ರಾಂತಿ ಕರ್ನಾಟಕ ಸಂಘದ ಅಧ್ಯಕ್ಷ ಶಿವು ಪೂಜಾರ ಮಾತನಾಡಿ ತಾಲೂಕಿನ ಅಮರಗೋಳ ಗ್ರಾಮದ ಕಿಳ್ಳಿಕೇತರ ಎಂಬುವರು ಪ್ರವರ್ಗ 1 ರಲ್ಲಿ ಬರುತ್ತಾರೆ. ಅವರು ಈಗ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದು ಸರಕಾರದ ಸವಲತ್ತು ಪಡೆಯುತ್ತಿದ್ದಾರೆ. ಇದರಿಂದ ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗುತ್ತಿದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಇಂತಹ ಖೊಟ್ಟಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ತಹಶೀಲ್ಧಾರ ಅವರು ಇಂತಹ ಪ್ರಕರಣಗಳನ್ನು ಪರಿಶೀಲನೆ ಮಾಡಿ ಅವುಗಳನ್ನು ರದ್ದುಗೊಳಿಸಿ ನಮಗೆ ನ್ಯಾಯ ಒದಗಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಅಶೋಕ ಮದಗುಣಕಿ, ರಾಜು ನಡುವಿನಮನಿ, ಸಂಗಪ್ಪ ಮಾದರ, ಹನಮಂತಪ್ಪ ಕೆಳಗೇರಿ, ರಾಜು ದೊಡಮನಿ, ನಿಂಗಪ್ಪ ಕೆಳಗೇರಿ, ಮಾಂತೇಶ ಭೋವಿ, ಶಂಕರು ಹುಣಸಿಮರದ, ಶಿವು ಚಲವಾದಿ, ನಾಗಲಿಂಗಪ್ಪ ಚಲವಾದಿ, ಮುದಕಪ್ಪ ನಾಗಣ್ಣವರ, ರವಿ ದೊಡಮನಿ, ಶಿವಾನಂದ ಚಲವಾದಿ, ನವಲೇಶ್ವರ ಕಾತರಕಿ, ರವಿ ದೊಡಮನಿ ಇತರರು ದರಣೆಯಲ್ಲಿ ಪಾಲ್ಗೊಂಡಿದ್ದರು.

Related posts

ಅಣ್ಣಿಗೇರಿ ಗಾಣಿಗ ಸಮುದಾಯ ಟ್ರಸ್ಟ್ ಭೂಮಿಪೂಜೆ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ: 21ಲಕ್ಷ ಭರವಸೆ

eNEWS LAND Team

ಶಕ್ತಿ ಯೋಜನೆ ಖಂಡಿಸಿ ಅಟೋ ಚಾಲಕರ ಪ್ರತಿಭಟನೆ

eNewsLand Team

ವಾಲ್ಮೀಕಿ ಆದರ್ಶಗಳು ಸಮಾಜಕ್ಕೆ ಪ್ರೇರಣೆ : ಮಂಜುನಾಥ ಅಮಾಸಿ

eNEWS LAND Team