ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ರೈತ ಪರುಶರಾಮ ಅಣ್ಣಿಗೇರಿ ಕೃಷಿ ಚಟುವಟಿಕೆಗೆ ಎತ್ತು ಕಟ್ಟಿಕೊಂಡು ಚಕ್ಕಡಿ ಸಮೇತ ಹೊಲಕ್ಕೆ ತೆರಳುತ್ತಿದ್ದಾಗ ಗದಗ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಒಂದು ಎತ್ತು ಮೃತಪಟ್ಟಿದೆ. ರೈತ ಪರುಶರಾಮನಿಗೆ ಗಂಭೀರ ಗಾಯಗಳಾಗಿವೆ. ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದರಿಂದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ರೈತನ ಮನೆಗೆ ತೆರಳಿ ಆರೋಗ್ಯ ವಿಚಾರಿಸಿ, ಸ್ವಾಂತನ ಹೇಳಿ ಧನ ಸಹಾಯ ಮಾಡಿದರು.
ಈ ವೇಳೆ ಮಾಜಿ ಕ್ರೇಢಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ, ಶಿವಯೋಗಿ ಸುರಕೋಡ, ಶಿವಾನಂದ ಹೊಸಳ್ಳಿ, ಭೀಮಪ್ಪ ಜಂತ್ಲಿ, ಕುಮಾರ ಅಂಗಡಿ, ಮೃತ್ಯುಂಜಯ ದಿಂಡಿ, ಬಸವರಾಜ ಯಳವತ್ತಿ. ಎ.ಪಿಗುರಿಕಾರ, ಉಪಸ್ಥಿತರಿದ್ದರು.