ಇಎನ್ಎಲ್ ಕಲಘಟಗಿ: ತಾಲೂಕಿನ ಬೇಗೂರು ಗ್ರಾಪಂ ಉಪಾಧ್ಯಕ್ಷರಾಗಿ ಶಂಕ್ರಪ್ಪ ಫಕ್ಕೀರಪ್ಪ ಬೋಳಣ್ಣವರ ಅವಿರೋಧವಾಗಿ ಆಯ್ಕೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಚುನಾವಣಾ ಅಧಿಕಾರಿ ಪರಶುರಾಮ ಸಾವಂತ ಘೋಷಿಸಿದ್ದಾರೆ.
ಈ ವೇಳೆ ವಿಷಯ ನಿರ್ವಾಹಕ ರವೀಂದ್ರ ಅಲ್ಲಾಪೂರ, ಪಿಡಿಓ ರವಿರಾಜ ಹಿರೇಗೌಡ್ರು, ಅಧ್ಯಕ್ಷೆ ನಾಗವ್ವ ಅಂಗಡಿ, ಹಾಗೂ ಗ್ರಾಪಂ ಸದಸ್ಯರಾದ ಚನಬಸವ್ವ ಮುಕ್ಕಲಕಟ್ಟಿ, ದ್ಯಾಮವ್ವ ಬಡಿಗೇರ, ರೇಣುಕಾ ಬಿಸರಳ್ಳಿ, ಹನುಮಂತಪ್ಪ ಗೌರಿ, ಮಾನಪ್ಪ ಬಡಿಗೇರ, ರಾಚಪ್ಪ ಬಿಸರಳ್ಳಿ, ಗುರುನಾಥ್ ಹರಿಜನ, ಸಿದ್ದವ್ವ ಶಿಗ್ಗಟ್ಟಿ, ಸಿಬ್ಬಂದಿ ಪ್ರಭು ಅಂಗಡಿ, ಶಿವಾನಂದ ಧನಿಗೊಂಡ, ಗ್ರಾಮಸ್ಥರಾದ ಪರಶುರಾಮ ರಜಪೂತ, ಚನ್ನಬಸಪ್ಪ ಶಿಗ್ಗಟ್ಟಿ, ಮಹದೇವಪ್ಪ ಸುತಗಟ್ಟಿ ಮುಂತಾದವರಿದ್ದರು.