ಇಎನ್ಎಲ್ ಧಾರವಾಡ
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಸದ ಡಿ. ಕೆ. ಸುರೇಶ್ ಭಾವಚಿತ್ರ ದಹಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.
ಸೋಮವಾರ ರಾಮನಗರ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡ ಕಾರ್ಯಕ್ರಮದಲ್ಲಿ ಸಭಾ ಮರ್ಯಾದೆ ಮರೆತು ಕಾಂಗ್ರೆಸ್ಸಿಗರು ವರ್ತನೆ ತೋರಿದ್ದಾರೆ.
ಅಂಬೇಡ್ಕರ್, ಕೆಂಪೇಗೌಡರಿಗೆ ತುಂಬಿದ ಸಭೆಯಲ್ಲಿ ಗೂಂಡಾ ರಾಜಕಾರಣಿ ಸುರೇಶ್ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ದತ್ತಮೂರ್ತಿ ಕುಲಕರ್ಣಿ, ಪ್ರಭು ನವಲಗುಂದಮಠ, ಜಿಲ್ಲಾ ವಕ್ತಾರ ರವಿ ನಾಯಕ, ಚಂದ್ರಶೇಖರ ಗೋಕಾಕ್, ರಂಗಾ ಬದ್ದಿ, ಸಿದ್ದು ಮೊಗಲಿಶೆಟ್ಟರ, ಬಸವರಾಜ ಅಮ್ಮಿನಬಾವಿ, ವಿರುಪಾಕ್ಷ ಗೋಪಾಲ ಬದ್ದಿ, ಜಗದೀಶ ಬುಳ್ಳಾನವರ, ಶಿವಾನಂದ ಮುತ್ತಣ್ಣವರ, ಅವಿನಾಶ ಹರಿವಾಣ, ಸುಭಾಷ ಅಂಕಲಕೋಟಿ, ಪ್ರಶಾಂತ ಹಾವಣಗಿ, ರಾಜು ಕಾಳೆ, ಹನುಮಂತಪ್ಪ ದೊಡ್ಡಮನಿ, ಕೃಷ್ಣಾ ಗಂಡಗಾಳೇಕರ, ಲಕ್ಷ್ಮೀಕಾಂತ ಘೋಡಕೆ, ರಾಜು ಕೋರ್ಯಾನಮಠ, ಅನುಪ ಬಿಜವಾಡ, ಉಮೇಶ ದುಶಿ, ಮುರಗೇಶ ಹೊರಡಿ, ಸೀಮಾ ಲದ್ವಾ, ವಿಜಯಲಕ್ಷ್ಮಿ ತಿಮ್ಮೊಲಿ, ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ಉಮಾ ಮುಕುಂದ, ಅಕ್ಕಮಹಾದೇವಿ ಹೆಗಡೆ, ಸಂಗೀತಾ ಇಜಾರದ, ಸವಿತಾ ಚವ್ಹಾಣ, ತಾರಾಮತಿ ವಾಶಪ್ಪನವರ ಇತರರಿದ್ದರು.