ಇಎನ್ಎಲ್ ಧಾರವಾಡ
ಯಾರಿಗೆ ಆಗಲಿ ಬಲವಂತವಾಗಿ ಮತಾಂತರ ಮಾಡಿದ್ರೆ ಅದು ಕಾನೂನು ಮತ್ತು ನನ್ನ ವೈಯಕ್ತಿಕವಾಗಿ ವಿರೋಧ ಇದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಎಂ ಎಲ್ ಸಿ ತಾರಾ ಹೇಳಿದರು.
ಮತಾಂತರ ಅನ್ನೋದು ನಾವು ಹುಟ್ಟಿನಿಂದ ಬಂದ ಧರ್ಮವೇ ನಮ್ಮ ಧರ್ಮ ಆಗಿರುತ್ತದೆ.
ಆದ್ರೆ ಯಾರದೋ ಬಲವಂತಕ್ಕಾಗಿ, ಅಥವಾ ಎಮೋಷನಲ್ ಬ್ಲಾಕ್ ಮೇಲ್ ಆಗಲಿ.
ಬೇರೆ ಬೇರೆ ಅನುಕೂಲ ಮಾಡೋದಾಗಿ ಆಸೆ ಆಮಿಷ ಒಡ್ಡಿ ಮತಾಂತರ ಮಾಡೋದು ಕಾನೂನು ವಿರುದ್ಧ.
ಅಂತಹ ಕೆಲಸಕ್ಕೆ ಯಾರಾದ್ರೂ ಕೈಹಾಕಿದ್ರೆ ಅದು ಶಿಕ್ಷೆಗೆ ಅರ್ಹ.
ಎಲ್ಲರಿಗೂ ವೈಯಕ್ತಿಕವಾದ ನಿರ್ಧಾರ ಇರುತ್ತೆ.
ಆದ್ರೆ ಯಾರದೋ ಬಲವಂತಕ್ಕೆ ಒಳಗಾಗಬಾರದು ಅನ್ನೋದು ಸರ್ಕಾರದ ಕಾಳಜಿ.
ಕಾಂಗ್ರೆಸ್ ಪ್ರತಿಭಟನೆ ಮಾಡದು ಅವರ ವೈಯಕ್ತಿಕ ವಿಚಾರ ಅದು.
ಬಲವಂತವಾಗಿ ಮತಾಂತರ ಮಾಡುವವರ ವಿರುದ್ಧ ಈ ಕಾಯ್ದೆ ಜಾರಿ ಆಗುತ್ತಿದೆ.
ಯಾವುದೇ ಕುಟುಂಬ ಅಥವಾ ವೈಯಕ್ತಿಕವಾಗಿ ಸರ್ಕಾರ ಕೈಹಾಕಿಲ್ಲ.
ಎನ್ ಆರ್ ಐ ಗಳ ಕೈವಾಡ ಇದರಲ್ಲಿ ಇದೆ.
ಜೊತೆಗೆ ಬೇರೆ ಬೇರೆ ದೇಶಗಳ ಹಣ ಸಹಾಯ ಆಗ್ತಿದೆ ಅನ್ನೋ ಮಾಹಿತಿ ಇವೆ.
ಆ ರೀತಿ ಇದ್ದರೂ ಇರಬಹುದು,
ಮತಾಂತರ ಅದವರು ಯಾರೇ ಆಗಲಿ ಅವರು ಮತ್ತೆ ಅವರ ಧರ್ಮಕ್ಕೆ ಹೋಗೋಕೆ ಸ್ವತಂತ್ರ ಇದೆ ಎಂದರು.