27.4 C
Hubli
ಮೇ 5, 2024
eNews Land
ಜಿಲ್ಲೆ ಸುದ್ದಿ

ಗಡಿ ಚೆಕ್ ಪೋಸ್ಟ್ ಗಳಲ್ಲಿ ಚುರುಕಾಗಿ ಕಾರ್ಯನಿರ್ವಹಿಸಿ : ಜಿಲ್ಲಾ ಚುನಾವಣಾಧಿಕಾರಿ ಹಾಗೂ ಡಿಸಿ ಗುರುದತ್ತ ಹೆಗಡೆ

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿರುವ ಅಫ್ರೋಜ್ ಮಂಚನಕೊಪ್ಪ ಹಾಗೂ ಬೆಂಬಲಿಗರು!!
ಇಎನ್ಎಲ್ ಧಾರವಾಡ : ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಅತೀ ಅವಶ್ಯಕವಾಗಿದ್ದು, ಈಗಾಗಲೇ ಚುನಾವಣೆಗೆ ಸಂಬಂಧಿಸಿದ ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ತಕ್ಷಣವೇ ಜಾರಿಗೆ ಬರುವಂತೆ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಮೃತನ ತಾಯಿಗೆ ಸ್ವಿಮ್ಮಿಂಗ್ ಪೂಲ್ ಮಾಲೀಕರು ಮತ್ತು ವಿಮಾ ಕಂಪನಿಯಿಂದ ಪರಿಹಾರ ಕೊಡಲು ಆಯೋಗದ ಆದೇಶ.

ನವಲಗುಂದ-ರೋಣ ಬಾರ್ಡರ್ ಚೆಕ್ ಪೋಸ್ಟ್, ಅಣ್ಣಿಗೇರಿ-ಗದಗ ಕೊಂಡಿಕೊಪ್ಪ ಬಾರ್ಡರ್ ಚೆಕ್ ಪೋಸ್ಟ್, ಕುಂದಗೋಳ-ಲಕ್ಷ್ಮೀಶ್ವರ ರೋಡ್ ಗುಡಗೇರಿ ಕ್ರಾಸ್ ಚೆಕ್ ಪೋಸ್ಟ್, ಪುಣಾ-ಬೆಂಗಳೂರು ರೋಡ್ ತಡಸ ಬಾರ್ಡರ್ ಚೆಕ್ ಪೋಸ್ಟ್, ಹಳಿಯಾಳ ರೋಡ ಚೆಕ್ ಪೋಸ್ಟ್, ಕಲಘಟಗಿ ರೋಡ್ ಚೆಕ್ ಪೋಸ್ಟ್, ಸವದತ್ತಿ ರೋಡ್ ಚೆಕ್ ಪೋಸ್ಟ್, ಕೃಷಿ ವಿಶ್ವವಿದ್ಯಾಲಯ ಹತ್ತಿರದ ಚೆಕ್ ಪೋಸ್ಟ್, ಹೆಬ್ಬಳ್ಳಿ ಅಗಸಿ ನವಲಗುಂದ ರೋಡ ಚೆಕ್ ಪೋಸ್ಟ್, ತೇಗೂರ, ಎನ್‍ಎಚ್-4, ಬೆಳಗಾವಿ-ಧಾರವಾಡ ರೋಡ್ ಚೆಕ್‍ಪೋಸ್ಟ್, ಹಾರೋಬೆಳವಡಿ ಧಾರವಾಡ-ಸವದತ್ತಿ ರೋಡ್ ಚೆಕ್ ಪೋಸ್ಟ್, ಹುಬ್ಬಳ್ಳಿ-ಕುಂದಗೋಳ ರೋಡ್ ಶೆರೆವಾಡ ಬಾರ್ಡರ್ ಚೆಕ್ ಪೋಸ್ಟ್, ಗಬ್ಬೂರ ಕ್ರಾಸ್ ಚೆಕ್ ಪೋಸ್ಟ್, ಸೋನಿಯಾಗಾಂಧಿ ನಗರ ಕುಂದಗೋಳ ರೋಡ್ ಚೆಕ್ ಪೋಸ್ಟ್, ನವಲಗುಂದ ರೋಡ ಚೆಕ್ ಪೋಸ್ಟ್, ಗದಗ ರೋಡ ಚೆಕ್‍ಪೋಸ್ಟ್, ಸುಳ್ಯದ ರೋಡ್ ಚೆಕ್ ಪೋಸ್ಟ್, ಗೋವಾ ರೋಡ್ ಚೆಕ್ ಪೋಸ್ಟ್, ಗೋಕುಲ ಕ್ರಾಸ್ ಚೆಕ್‍ಪೋಸ್ಟ್, ಕಾರವಾರ ರಸ್ತೆ ಚೆಕ್‍ಪೋಸ್ಟ್, ಕಲಘಟಗಿ ಕಾರವಾರ ರೋಡ್ ಸಂಗಟಿಕೊಪ್ಪ ಬಾರ್ಡರ್ ಚೆಕ್ ಚೆಕ್ ಪೋಸ್ಟ್, ಆಳ್ನಾವರ ಧಾರವಾಡ ಗೋವಾ ರೋಡ್ ಕಡಬಗಟ್ಟಿ ಚೆಕ್ ಪೋಸ್ಟ್, ಬಣದೂರ ಧಾರವಾಡ ಹಳಿಯಾಳ ರೋಡ್ ಚೆಕ್ ಪೋಸ್ಟ್, ತಬಕದಹೊನ್ನಳ್ಳಿ ಕಲಘಟಗಿ ತಡಸ ಚೆಕ್ ಪೋಸ್ಟ್ ಈ ಸ್ಥಳಗಳಿಗೆ ನಿಯೋಜಿಸಿದ ತಂಡಗಳು ಸಂಬಂಧಿಸಿದ ವಿಧಾನಸಭಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳ ಕಾರ್ಯಾಲಯಕ್ಕೆ ಹಾಜರಾಗಿ ಅಧಿಕಾರಿಗಳು ಒಬ್ಬರಿಗೊಬ್ಬರು ಸಮನ್ವಯ ಸಾಧಿಸಿ, ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದ್ದಾರೆ.

ಈ ಸ್ಥಳಗಳಿಗೆ ನಿಯೋಜಿಸಿದ ಎಸ್‍ಎಸ್‍ಟಿ ತಂಡಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು (ಪೊಲೀಸ್ ಹಾಗೂ ಅಬಕಾರಿ ಅಧಿಕಾರಿ/ ಸಿಬ್ಬಂದಿಗಳನ್ನೊಳಗೊಂಡಂತೆ) ತಕ್ಷಣವೇ ಸದರಿ ಚೆಕ್ ಪೋಸ್ಟ್ ಗಳಲ್ಲಿ ಹಾಜರಾಗಿ ಚುನಾವಣಾ ಕಾರ್ಯಗಳನ್ನು ನಿರ್ವಹಿಸಲು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Related posts

ಇನ್ಸ್ಟಾಗ್ರಾಂ ಬಳಸಿ ಮದುವೆ ಮುರಿಯಲು ಮುಂದಾದ ನಾಲಾಯಕ್!

eNewsLand Team

ಅಣ್ಣಿಗೇರಿ ತಾಲೂಕಿನ ಜೈನ ಸಮಾಜ ಬಾಂಧವರಿಂದ ಜೈನಮುನಿ ಹತ್ಯೆ ಖಂಡಿಸಿ ಮೌನಪ್ರತಿಭಟನೆ

eNewsLand Team

ಮತ್ತೆ ಸಿಡಿದೆದ್ದ ರಾಜಾಹುಲಿ ಬಿಎಸ್ವೈ: 4ರಿಂದ ಬಿಜೆಪಿ ಹೋರಾಟ

eNewsLand Team