ಇಎನ್ಎಲ್ ಅಣ್ಣಿಗೇರಿ: ಧಾರವಾಡ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಘಟಕ ಗಣರಾಜ್ಯೋತ್ಸವ ನಿಮಿತ್ಯ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದರು.
ಪಟ್ಟಣದ ಯು.ಜಿ.ಎಸ್.ಅಣ್ಣಿಗೇರಿ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಇಫ್ರಾನಾಜ್ ಮನ್ಸೂರಅಲಿ ಉಗರಗೋಳ ಪ್ರಬಂಧ ಬರಹ ಕಿರಿಯರ ವಿಭಾಗದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಎಂಬ ವಿಷಯದ ಮೇಲೆ ಪ್ರಬಂಧ ಬರೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾಳೆ. ಕನ್ನಡ ಸಾಹಿತ್ಯ ಪರಿಷತ್ ಬಳಗದಿಂದ ರವಿರಾಜ ವೇರ್ಣೆಕರ ಹಾಗೂ ಶಾಲೆಯ ಶಿಕ್ಷಕರ ವೃಂದ ಅಭಿನಂದಿಸಿದ್ದಾರೆ.