ಹುಬ್ಬಳ್ಳಿ.
ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ೧೭ ರಂದು ಪ್ರಚಾರ ಕೈಗೊಳ್ಳುವೆ.
೨೧ & ೨೨ ರಂದು ಸಿಂದಗಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳುವೆ
೨ ಕ್ಷೇತ್ರಗಳಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ
ಪ್ರಚಾರದಿಂದ ಬಿಎಸ್ ವೈ ದೂರ. ಇನ್ನೂ ಸಮಯ ಇದೆ. ಅವರು ಪ್ರಚಾರ ಸಹ ಕೈಗೊಳ್ಳುತ್ತಾರೆ
ಡಿಕೆ ಶಿವಕುಮಾರ ವಿರುದ್ದ ಉಗ್ರಪ್ಪ ಹಾಗೂ ಸಲೀಂ ಆರೋಪ ವಿಚಾರ
ಕಾಂಗ್ರೆಸ್ ಪಕ್ಷದಲ್ಲಿ ತಂತ್ರ ಕುತಂತ್ರ ನಡೆದಿವೆ. ಎಲ್ಲವನ್ನೂ ಆರೋಪ ಮಾಡಿ ಆಮೇಲೆ ಕ್ಷಮೆ ಕೇಳಿದರೆ ಹೇಗೆ..?
ಕಾಂಗ್ರೆಸ್ ನಲ್ಲಿ ಎರಡು ಗುಂಪುಗಳಿವೆ. ಸಿದ್ದರಾಮಯ್ಯ ಹಾಗೂ ಡಿಕೆ ಗುಂಪು ಮಧ್ಯೆ ಪೈಟ್ ಶುರುವಾಗಿದೆ.
ಸಿದ್ದರಾಮಯ್ಯ- ಡಿಕೆಶಿ ಮಧ್ಯೆ ಸಿಎಂ ಹುದ್ದೆಗೆ ಪೈಟ್ ಗೆ ಇಳಿದಿವೆ
ಉಗ್ರಪ್ಪ, ಸಿದ್ದರಾಮಯ್ಯರ ಪಟ್ಟದ ಶಿಷ್ಯ. ಅವರೇ ಡಿಕೆಶಿ ವಿರುದ್ಧ ಆರೋಪ ಮಾಡಿದ್ದಾರೆ
ಡಿಕೆಯವರನ್ನು ಹಣಿಯಲು ಸಿದ್ದರಾಮಯ್ಯ ಬೆಂಬಲಿಗರು ನಿಂತಿದ್ದಾರೆ
ಕಾಂಗ್ರೆಸ್ ಪಕ್ಷ ಅವಸಾನದತ್ತ ಸಾಗಿದೆ. ರಾಜ್ಯದಲ್ಲಿ ಸಧ್ಯ ಕಾಂಗ್ರೆಸ್ ಐಸಿಯುನಲ್ಲಿದೆ. ಮುಂದೆ ಅವರ ಫೈಟ್ ನಿಂದ ಪಕ್ಷ ಸಂಪೂರ್ಣ ಅವಸಾನ ಆಗಲಿದೆ