27.6 C
Hubli
ಏಪ್ರಿಲ್ 25, 2024
eNews Land
ರಾಜ್ಯ

ಕನ್ನಡ ಸಮೃದ್ದ ತಾಂತ್ರಿಕ ಭಾಷೆಯಾಗುವ ಅಗತ್ಯವಿದೆ : ಸಚಿವ ಕತ್ತಿ

ಕನ್ನಡ ಸಮೃದ್ದ ತಾಂತ್ರಿಕ ಭಾಷೆಯಾಗುವ ಅಗತ್ಯವಿದೆ : ಸಚಿವ ಕತ್ತಿ

ಇಎನ್ಎಲ್ ಬಾಗಲಕೋಟೆ:
ಕನ್ನಡವು ಸಮೃದ್ದ ತಾಂತ್ರಿಕ ಭಾಷೆಯಾಗಿ ಎಲ್ಲ ಹಂತಗಳಲ್ಲೂ ಬಳಕೆಯಾಗುವುದು ವಿಶ್ವ ಕನ್ನಡ ದೃಷ್ಠಿಯಿಂದ ಅಗತ್ಯವಾಗಿದೆ ಎಂದು ಅರಣ್ಯ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ತಿಳಿಸಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ವಿನ್ಯಾಸಗಳಲ್ಲಿ ಯುನಿಕೋಟ್ ಪೂರ್ಣ ರೂಪದಲ್ಲಿ ಕನ್ನಡ ಸುಲಭವಾಗಿ ಎಲ್ಲರಿಗೂ ಲಭ್ಯವಾಗುವ ಹಾಗೆ ಮಾಡಿರುವುದು ಕನ್ನಡ ಭಾಷೆಯ ವಿಶ್ವ ಪ್ರಸಾರಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಕನ್ನಡ ರಾಜ್ಯೋತ್ಸವ ಸಂಭ್ರಮದ ಹಬ್ಬವನ್ನು ಹೊರರಾಜ್ಯಗಳಲ್ಲಿ ಆಚರಿಸಲಾಗುತ್ತಿದೆ. ಅಮೇರಿಕಾ, ಸಿಂಗಾಪೂರ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದುಬೈ ಇನ್ನೀತರ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕೂಡ ರಾಜ್ಯೋತ್ಸವ ಆಚರಿಸುತ್ತಿದ್ದಾರೆ. ನಮ್ಮ ಸರಕಾರ ಕನ್ನಡ ಭಾಷೆ, ಸಂಸ್ಕøತಿ, ಸಾಹಿತ್ಯ, ಕಲೆ, ಸಂಗೀತದ ಬಗ್ಗೆ ಯುವ ಪೀಳಿಗೆಗೆ ಉತ್ತೇಜನ ನೀಡಲು ಅನೇಕ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಕರ್ನಾಟಕ ಪ್ರಕೃತಿ ಸೊಬಗು, ಶಿಲ್ಪಕಲಾ ಸೌಂದರ್ಯ, ವನ್ಯಜೀವಿ ಸಂಪತ್ತು, ನೈಸರ್ಗಿಕ ಸಂಪತ್ತು ಹಾಗೂ ಅನನ್ಯವಾದ ಸಾಹಿತ್ಯ ಸಂಪತ್ತು ಬೆರಗು ಗೊಳಿಸುವಂಥದ್ದಾಗಿವೆ ಎಂದರು.
ಕನ್ನಡ ಭಾಷೆ ಕವಿ ಕೋಗಿಲೆಗಳ ಸಾಹಿತ್ಯವಾಗಿ ವಿಜೃಂಭಿಸುತ್ತಿದೆ. ಜೀವನ ಪ್ರೀತಿ, ಮಾನವೀಯತೆ, ಕನ್ನಡ ಜನಪದ ಸಾಹಿತ್ಯ ತಾಯಿಬೇರಾಗಿ ಕನ್ನಡ ಭಾಷೆಯಾಗಿದೆ. ಆದಿಕವಿ ಪಂಪ, ಪೊನ್ನ, ರನ್ನ, ಜನ್ನರ ಆದಿಯಾಗಿ ಹಳಗನ್ನಡ ಸಾಹಿತ್ಯ ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಹೊಸ ದೃಷ್ಠಿಯನ್ನು ಪಡೆದು ನವೋದಯ ಸಾಹಿತ್ಯ ಶ್ರೀಮಂತವಾಗಿ ಮೂಡಿಬಂದಿದೆ. ಜಾಗತಿಕ ಅಂತಕರಣವನ್ನು ಕಲಕುವ ರೀತಿಯಲ್ಲಿ ಬಂಡಾಯ-ದಲಿತ ಸಾಹಿತ್ಯವು ಕನ್ನಡ ಭಾಷೆಗೆ ಶ್ರೇಷ್ಠತೆಯನು ನೀಡಿದೆ ಎಂದರು.
ದೇಶದಲ್ಲಿಯೇ ಪ್ರಥಮವಾಗಿ ರೂಪಿಸಲಾದ ಮುಖ್ಯಮಂತ್ರಿ ರೈತ ವಿದ್ಯಾ ನಿಧಿಯು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ ರೈತ ಮಕ್ಕಳಿಗೆ ಶಿಷ್ಯವೇತನ ನೀಡಿ ವಿದ್ಯಾರ್ಜನೆ ಮುಂದುವರೆಸಲು ನೆರವಿನ ಯೋಜನೆಯಾಗಿದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಮುಖ್ಯಮಂತ್ರಿಗಳು ನವ ಕರ್ನಾಟಕದ ಕನಸನ್ನು ಸಾಕಾರಗೊಳಿಸಲು 13 ಅಮೃತ ಯೋಜನೆಗಳನ್ನು ಘೋಷಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಲಸಿಕಾಕರಣವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಶೇ.86 ರಷ್ಟು ಪ್ರಥಮ ಡೋಜ್ ನೀಡಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದ ಪೂರ್ವದಲ್ಲಿ ಕನ್ನಡಾಂಭೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಒ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಮ್.ಗಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

 

ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರು ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಜೀವನ ಬಡಿಗೇರ, ಬಸವರಾಜ ಭಜಂತ್ರಿ, ಹನಮಂತ ಭಜಂತ್ರಿ (ಜಾನಪದ), ಶಿವಪುತ್ರಪ್ಪ ತಾರಿವಾಳ (ಸಂಗೀತ), ಲಕ್ಷ್ಮಣ ಮಾದರ (ತಬಲಾ), ಮುಪ್ಪನಗೌಡ ಗೌಡರ, ಜಯಶ್ರೀ ಬನಹಟ್ಟಿ (ನಾಟಕ), ಎನ್.ಎಸ್.ಸನ್ನೂರ, ತಯಾನಖಾನ ಇನಾಂಮದಾರ (ರಂಗಭೂಮಿ), ಹಯತಸಾಬ ಮದರಖಾನ (ಬಯಲಾಟ), ಮಹಾದೇವ ಜಗತಾಪ (ಚಿತ್ರಕಲೆ), ಹನಮಂತ ತಳವಾರ (ಶಿಲ್ಪಕಲೆ), ಸಿದ್ದಪ್ಪ ಮಾದರ, ಶೀಲಾಕಾಂತ ಪತ್ತಾರ (ಸಾಹಿತ್ಯ), ವಿಜಯಕುಮಾರ ಪವಾರ (ಬಲ್ಬಕಲೆ), ಗುಣಾಕರ ಶೆಟ್ಟಿ, ಆರ್.ಡಿ.ಬಾಬು, ಅಶೋಕ ಶ್ಯಾವಿ, ಲಕ್ಷ್ಮೀ ಗೌಡರ, ನಿಂಗರಾಜ ಮಬ್ರುಮಕರ (ಸಮಾಜ ಸೇವೆ), ಬಿ.ರತ್ನಾಕರ ಶೆಟ್ಟಿ, ರಾಘವೇಂದ್ರ ಕಲಾದಗಿ (ಪತ್ರಿಕಾ ಮಾಧ್ಯಮ)

Related posts

ಸಿದ್ಧೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿರ

eNewsLand Team

ಮುನ್ನಡೆ ಕಾಯ್ದುಕೊಂಡ ಶ್ರೀನಿವಾಸ ಮಾನೆ ಆದರೆ ಗೆಲ್ಲುವ ವಿಶ್ವಾಸದಲ್ಲಿ ಸಿಎಂ ಬೊಮ್ಮಾಯಿ

eNEWS LAND Team

ಕರ್ನಾಟಕದಲ್ಲಿಂದು ಕೊರೊನಾ ಪ್ರಕರಣಗಳು ಎಷ್ಟು?

eNEWS LAND Team