ಇಎನ್ಎಲ್ ಕಲಘಟಗಿ: ತಾಲೂಕಿನ ಕಾಮಧೇನು ಗ್ರಾಮದಲ್ಲಿ ಜಗನ್ಮಾತೆ ಸ್ವರೂಪೆ ಗಾಳೆಮ್ಮದೇವಿ ಹಾಗೂ ಮರುಳಸಿದ್ದೇಶ್ವರ ಮತ್ತು ಅಮೃತ ಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಾಳಮ್ಮದೇವಿ ದೇವಸ್ಥಾನ ಉದ್ಘಾಟನೆ ನಡೆಯುತ್ತಿದ್ದು ಸಂಜೆ ಸಂದರ್ಭದಲ್ಲಿ ಗ್ರಾಮದ ಸುಮಂಗಲೆಯರು ಹಾಗೂ ಗುರುಹಿರಿಯರು ಹಾಗೂ ಯುವಕರು ಭಕ್ತಿಭಾವದ ಪ್ರವಚನ ಹೋಮ ಹವನ ಕಾರ್ಯಕ್ರಮವು ಯಾವುದೇ ಜಾತಿ ಭೇದ ಭಾವ ಇಲ್ಲದೇ ಅತಿ ವಿಜೃಂಭಣೆಯಿಂದ ಸರ್ವಧರ್ಮದ ಸಂಕೇತವಾಗಿ ನಡೆಯುತ್ತಿದ್ದು ಎಲ್ಲ ಸದ್ಭಕ್ತರ ದಾನದಿಂದ ಶ್ರೇಷ್ಠವಾದ ಅನ್ನಸಂತರ್ಪಣೆ ಹಾಗೂ ವಿವಿಧ ಕಾರ್ಯಕ್ರಮಗಳು ವೈಭವಗಳೊಂದಿಗೆ ನಡೆಯುತ್ತಿದೆ. ಈ ಕಾರ್ಯಕ್ರಮವು ಭಾನುವಾರದಂದು ಪೂರ್ಣಗೊಳ್ಳುತ್ತಿದ್ದು ಎಲ್ಲಾ ಭಕ್ತಾದಿಗಳು ದೇವಿಯ ಕೃಪೆಗೆ ಪಾತ್ರರಾಗಬೇಕೆಂದ ಭಕ್ತ ಸಮೂಹ.
previous post