ಇಎನ್ಎಲ್ ನವಲಗುಂದ : ಅಖಿಲ ಭಾರತ ವೀರಶೈವ ಮಹಾಸಭಾದ ಸಂಸ್ಥಾಪಕರು ಹಾಗೂ ಪ್ರಥಮ ಅಧಿವೇಶನದ ಅಧ್ಯಕ್ಷರಾಗಿದ್ದ ಕರ್ನಾಟಕದ ಶಿಕ್ಷಣ ಕ್ರಾಂತಿಗೆ ಸ್ಪೂರ್ತಿಯಾದ ತ್ಯಾಗವೀರ ದಾನಿಗಳಾದ ಶಿರಸಂಗಿ ಲಿಂಗರಾಜ ದೇಸಾಯಿಯವರ 161 ನೇ ಜಯಂತಿಯು ಸರಳ ಸಂಕ್ಷಿಪ್ತವಾಗಿ ಪಟ್ಟಣದ ಲಿಂಗರಾಜ ಸರ್ಕಲ್ನಲ್ಲಿರುವ ಮೂರ್ತಿಗೆ ಜ.10ರಂದುಮಾಲಾರ್ಪಣೆ ಮಾಡಿ ಲಿಂಗರಾಜರ ಸಮಾಧಿ ಸ್ಥಳವಾದ ತಡಿಮಠದಲ್ಲಿ ಜರುಗಲಿದೆ ಎಂದು ಕುಡು ಒಕ್ಕಲಿಗ ಸಮಾಜದ ಕಾರ್ಯದರ್ಶಿ ಮಂಜುನಾಥ ಸುಬೇದಾರ ಪ್ರಕಟಣೆಗೆ ತಿಳಿಸಿದ್ದಾರೆ.