ಕೇಂದ್ರ ಲಲಿತಲಾ ಅಕಾಡೆಮಿ ಪ್ರಾದೇಶಿಕ ಕಚೇರಿ ಸಂಯೋಜಕರಾಗಿ ಶ್ರೀನಿವಾಸ ಶಾಸ್ತ್ರಿ
ಹುಬ್ಬಳ್ಳಿ ಅ.20:
ಇಲ್ಲಿನ ಕಲಾವಿದರಾದ ಶ್ರೀನಿವಾಸ ಶಾಸ್ತ್ರಿಯವರನ್ನು ಕೇಂದ್ರ ಲಲಿತಕಲಾ ಅಕಾಡೆಮಿಯ ಹುಬ್ಬಳ್ಳಿ ಧಾರವಾಡ ಪ್ರಾದೇಶಿಕ ಕಚೇರಿಯ ಸಂಯೋಜಕರು/ ಸಂಚಾಲಕರನ್ನಾಗಿ ಕೇಂದ್ರ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಡಾ.ಉತ್ತಮ್ ಪಚಾರ್ನೆ ನೇಮಕ ಮಾಡಿದ್ದಾರೆ.
ಶಾಸ್ತ್ರಿ ಯವರು ಪ್ರತಿಭಾವಂತ ಕಲಾವಿದರಾಗಿದ್ದು,ದೃಶ್ಯಕಲೆಯಲ್ಲಿ ಉನ್ನತ ಪದವಿ ಹೊಂದಿದ್ದಾರೆ. ಕರ್ನಾಟಕ ರಾಜ್ಯದ ದೃಶ್ಯ ಕಲಾವಿದರು ಹಲವಾರು ದಶಕಗಳಿಂದ ಈ ಪ್ರಾದೇಶಿಕ ಕೇಂದ್ರದ ಸ್ಥಾಪನೆಯ ಬೇಡಿಕೆ ಇರಿಸಿದ್ದರು. ಕೇಂದ್ರ ಮಂಜೂರಾತಿ ಪ್ರಕ್ರಿಯೆಯಲ್ಲಿ ಶ್ರೀನಿವಾಸ ಶಾಸ್ತ್ರಿಯವರು ಶ್ರಮಿಸಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರ ಅವರ ಮಾರ್ಗದರ್ಶನದಲ್ಲಿ ಪ್ರಾದೇಶಿಕ ಕಚೇರಿ ಧಾರವಾಡಕ್ಕೆ ಮಂಜೂರಾಗಿದೆ.