24 C
Hubli
ಏಪ್ರಿಲ್ 26, 2024
eNews Land
ಸಣ್ಣ ಸುದ್ದಿ ಸಂಸ್ಕೃತಿ

ಕೇಂದ್ರ ಲಲಿತಲಾ ಅಕಾಡೆಮಿ ಪ್ರಾದೇಶಿಕ ಕಚೇರಿ ಸಂಯೋಜಕರಾಗಿ ಶ್ರೀನಿವಾಸ ಶಾಸ್ತ್ರಿ

ಕೇಂದ್ರ ಲಲಿತಲಾ ಅಕಾಡೆಮಿ ಪ್ರಾದೇಶಿಕ ಕಚೇರಿ ಸಂಯೋಜಕರಾಗಿ ಶ್ರೀನಿವಾಸ ಶಾಸ್ತ್ರಿ

ಹುಬ್ಬಳ್ಳಿ ಅ.20:

ಇಲ್ಲಿನ ಕಲಾವಿದರಾದ ಶ್ರೀನಿವಾಸ ಶಾಸ್ತ್ರಿಯವರನ್ನು ಕೇಂದ್ರ ಲಲಿತಕಲಾ ಅಕಾಡೆಮಿಯ ಹುಬ್ಬಳ್ಳಿ ಧಾರವಾಡ ಪ್ರಾದೇಶಿಕ ಕಚೇರಿಯ ಸಂಯೋಜಕರು/ ಸಂಚಾಲಕರನ್ನಾಗಿ ಕೇಂದ್ರ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಡಾ.ಉತ್ತಮ್ ಪಚಾರ್ನೆ ನೇಮಕ ಮಾಡಿದ್ದಾರೆ.

ಶಾಸ್ತ್ರಿ ಯವರು ಪ್ರತಿಭಾವಂತ ಕಲಾವಿದರಾಗಿದ್ದು,ದೃಶ್ಯಕಲೆಯಲ್ಲಿ ಉನ್ನತ ಪದವಿ ಹೊಂದಿದ್ದಾರೆ. ಕರ್ನಾಟಕ ರಾಜ್ಯದ ದೃಶ್ಯ ಕಲಾವಿದರು ಹಲವಾರು ದಶಕಗಳಿಂದ ಈ ಪ್ರಾದೇಶಿಕ ಕೇಂದ್ರದ ಸ್ಥಾಪನೆಯ ಬೇಡಿಕೆ ಇರಿಸಿದ್ದರು. ಕೇಂದ್ರ ಮಂಜೂರಾತಿ ಪ್ರಕ್ರಿಯೆಯಲ್ಲಿ ಶ್ರೀನಿವಾಸ ಶಾಸ್ತ್ರಿಯವರು ಶ್ರಮಿಸಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರ ಅವರ ಮಾರ್ಗದರ್ಶನದಲ್ಲಿ ಪ್ರಾದೇಶಿಕ ಕಚೇರಿ ಧಾರವಾಡಕ್ಕೆ ಮಂಜೂರಾಗಿದೆ.

Related posts

ಸಾಹಿತಿ ಅಮೃತೇಶ್ವರ ತಂಡರಗೆ ಮಕ್ಕಳ ಮಾಣಿಕ್ಯ ಪ್ರಶಸ್ತಿ

eNEWS LAND Team

ಮಾತಾಡ್ ಮಾತಾಡ್ ಕನ್ನಡ ಘೋಷ ವಾಕ್ಯ : ‘ಕನ್ನಡಕ್ಕಾಗಿ ನಾವು’ ಅಭಿಯಾನ

eNEWS LAND Team

ಉಚಿತ ಕೌಶಲ್ಯ ಆಧಾರಿತ ತರಬೇತಿಗೆ ಅರ್ಜಿ ಆಹ್ವಾನ

eNEWS LAND Team