ಇಎನ್ಎಲ್ ಧಾರವಾಡ: ತಾಲೂಕಿನ ಕಣವಿಹೊನ್ನಾಪೂರ ಗ್ರಾಮದ ಶ್ರೀ ಸಿದ್ದಾರೂಢರ ಜಯಂತೋತ್ಸವ ಸಮಿತಿ ಶ್ರೀ ಆರೂಢ ದರ್ಶನ ಜ್ಞಾನಪ್ರಕಾಶನ ಆಶ್ರಮ ಶ್ರೀ ಕ್ಷೇತ್ರ ಕಣವಿಹೊನ್ನಾಪೂರ ವತಿಯಿಂದ ಪ್ರತಿವರ್ಷದಂತೆ ಸಿದ್ಧಾರೂಢರ 186ನೇ ಜಯಂತಿ ಜಾತ್ರಾ ಮಹೋತ್ಸವ ಹಾಗೂ 16ನೇ ವಾರ್ಷಿಕೋತ್ಸವ ಸಮಾರಂಭ ಜೂ.12ರಂದು ಆಚರಿಸುವುದು ಎಂದು ಕಾರ್ಯಾಧ್ಯಕ್ಷ ಸಾತಪ್ಪ ಕುಂಕೂರ ಪ್ರಕಟನೆಗೆ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಶ್ರೀ ಸಿದ್ಧಾರೂಢರ ಪ್ರಶಸ್ತಿಗಳನ್ನು ಧಾರವಾಡದ ರಾ.ಹ.ದೇಶಪಾಂಡೆ ಸಭಾಭವನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬೆಳಿಗ್ಗೆ 10ಘಂಟೆಗೆ ಕೊಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಸಮಾರಂಭದಲ್ಲಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ ಕಾರ್ಯಕ್ರಮ ಜರಗುವವು ಬಡವಿದ್ಯಾರ್ಥಿಗಳಿಗೆ ನೋಟ್’ಬುಕ್ ಪೆನ್ ವಿತರಣೆ ಮಾಡಲಾಗುವುದು.