ಇಎನ್ಎಲ್ ಧಾರವಾಡ: ತಾಲೂಕಿನ ಕಣವಿಹೊನ್ನಾಪುರ ಗ್ರಾಮದ ಶ್ರೀ ಆರೂಢ ದರ್ಶನ ಜ್ಞಾನ ಪ್ರಕಾಶನ(ಆಶ್ರಮ) ಮತ್ತು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸುಕ್ಷೇತ್ರ ನಿಲಜಿ ಗ್ರಾಮದ ಶ್ರೀ ಅಡವಿ ಸಿದ್ಧೇಶ್ವರ ಮಠದಿಂದ ಅದ್ವೈತ ಸದ್ಗುರು ಶ್ರೀ ಸಿದ್ಧಾರೂಢರ 186 ನೇ ಜಯಂತಿಯ ಜಾತ್ರಾ ಮಹೋತ್ಸವ ಪ್ರಯುಕ್ತ 16ನೇ ವಾರ್ಷಿಕೋತ್ಸವ ಶ್ರೀ ಸಿದ್ಧಾರೂಢ ಪುರಸ್ಕಾರ ಹಾಗೂ ಶ್ರೀ ಸಿದ್ಧಾರೂಢ ರಾಜ್ಯ ಪ್ರಶಸ್ತಿ ಪ್ರಧಾನ ಮತ್ತು ಸಾಮಾಜಿಕ, ಸಾಂಸ್ಕೃತಿಕ, ಜಾನಪದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶ್ರೀ ಸಿದ್ಧಾರೂಢ ಸ್ವಾಮಿಗಳ ಜಯಂತ್ಯುತ್ಸವ ಸಮಿತಿ ವತಿಯಿಂದ ಅಧ್ಯಕ್ಷ ವಿದ್ಯಾನಂದ ಸ್ವಾಮಿಗಳ ಸದಿಚ್ಛೆಯ ಮೇರೆಗೆ 2022 ನೇ ಸಾಲಿನ ಶ್ರೀ ಸಿದ್ಧಾರೂಢ ಸ್ವಾಮಿಗಳ ರಾಜ್ಯ ಪ್ರಶಸ್ತಿ ಪ್ರಕಟಿಸಿದ್ದು “ರಂಗಭೂಮಿ”ಯಲ್ಲಿ ಸಾಧನೆ ಮಾಡಿದ ಕಲಾವಿದರಿಗೆ ನೀಡಲಾಗುತ್ತದೆ.
ಆಸಕ್ತ ರಂಗಭೂಮಿ ಕಲಾವಿದರು ತಾವು ಮಾಡಿದ ಸಾಧನೆಗಳ 2 ಝೆರಾಕ್ಸ ಪ್ರತಿಗಳು ದೃಢೀಕರಣ ಮಾಡಿದ ಹಾಗೂ ಇತ್ತೀಚಿನ 2 ಪಾಸ್ ಪೋರ್ಟ್ ಸೈಜ್ ಭಾವಚಿತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಭಾಗವಹಿಸಲು ಈ ವಿಳಾಸಕ್ಕೆ
ಶ್ರೀ ಸಿದ್ಧಾರೂಢ ಸ್ವಾಮಿಗಳ ಜಯಂತ್ಯುತ್ಸವ ಸಮಿತಿ, ಶ್ರೀಆರೂಢ ಜ್ಞಾನ ಪ್ರಕಾಶನ, ಕಣವಿಹೊನ್ನಾಪುರ ತಾ/ಜಿ: ಧಾರವಾಡ. ಪಿನ್ ಕೋಡ್ 580114,
ಶ್ರೀ ವಿದ್ಯಾನಂದ ಸ್ವಾಮಿ ಮೋ: 8277070558,
ಗುರುರಾಜ್ ಸಬನೀಸ್ ಮೊ: 9900681031,
ಪ್ರಭುಲಿಂಗಪ್ಪ ರಂಗಾಪುರ ಮೊ: 9945024076,
ಕುಂಟೊಜಿ ಬಸವನಗೌಡ ಮೊ: 9945564826
ಪತ್ರಿಕಾ ಪ್ರಚಾರ ಸಮಿತಿ ಅಧ್ಯಕ್ಷ ಜಯವಂತ ಬಾಂಬುಲೆ ಇವರನ್ನು ಸಂಪರ್ಕಿಸಿ 9008569294.