ಇಎನ್ಎಲ್ ಡೆಸ್ಕ್
ರಾಮನಗರ : ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ ಕಂಡ ತಕ್ಷಣ ಸಂಸದ ಪ್ರತಾಪ ಸಿಂಹ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ. ಚನ್ನಪಟ್ಟಣದ ಹೊರವಲಯದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮುದುಗೆರೆ ಬಳಿ ಹೋಟೆಲ್ ವೊಂದರಲ್ಲಿ ಪ್ರತಾಪ ಸಿಂಹ ಅವರು ಊಟ ಮಾಡುತ್ತಿದ್ದ ವೇಳೆ ಅಪಘಾತದ ಸದ್ದು ಕೇಳಿಸಿದೆ. ತಕ್ಷಣ ಹೊರ ಬಂದು ನೋಡಿದಾಗ ಕಾರೊಂದು ಪಲ್ಟಿಯಾಗಿತ್ತು. ಗಾಯಳುಗಳನ್ನ ಆಸ್ಪತ್ರೆಗೆ ಸೇರಿಸಲು ಅವರು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕಾರಿನ ಟೈರ್ ಬ್ಲಾಸ್ಟ್ ಆಗಿ ಅಪಘಾತ ಸಂಭವಿಸಿದೆ ಎಂದು ಗೊತ್ತಾಗಿದೆ.