ಇಎನ್ಎಲ್ ಅಣ್ಣಿಗೇರಿ: ಗೃಹಲಕ್ಷ್ಮೀ ಯೋಜನೆಯಲ್ಲಿ ಪಡಿತರಚೀಟಿ ಅಪ್ಲೋಡ್ ಆಗದೇ ಹೆಸರು ಸೇರ್ಪಡೆ, ತಿದ್ದುಪಡಿ, ಕಾರಣಾಂತರಗಳಿ0ದ ಅಪ್ಲೋಡ್ ಆಗುತ್ತಿಲ್ಲ. ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪಡಿತರದಾರರ ಹೆಸರು ಸೇರ್ಪಡೆಗೊಳಿಸಿ, ಯೋಜನೆ ಸದ್ಭಳಿಕೆಗೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ರೈತ ಮುಖಂಡ ನಿಂಗಪ್ಪ ಬಡೇಪ್ಪನವರ ತಹಶೀಲ್ದಾರ ಮಹಾಂತೇಶ ಮಠದ ಅವರಿಗೆ ಮನವಿ ಸಲ್ಲಿಸಿದರು. ನವಲಗುಂದ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು. ಒಂದು ವಾರದೊಳಗೆ ಸೂಕ್ತ ಕ್ರಮಕೈಗೊಳ್ಳದೇ ಹೋದ್ರೆ ನಿರಂತರ ಹೋರಾಟ ಮಾರ್ಗ ಹಿಡಿಯಬೇಕಾಗುತ್ತದೆಂದು ಆಗ್ರಹ ನೀಡಿದರು. ಈ ವೇಳೆ ಅಣ್ಣಿಗೇರಿ ತಾಲೂಕ ರೈತ ಸಂಘದ ಮುಖಂಡರು ಹಾಗೂ ರೈತರಿದ್ದರು.