ಇಎನ್ಎಲ್ ಹುಬ್ಬಳ್ಳಿ: ಇಲ್ಲಿನ ಕೇಶ್ವಾಪೂರ ಭವಾನಿನಗರ ವಿವೇಕಾನಂದ ಕಾಲೋನಿ ಡಾ.ಪಿ.ವಿ.ದತ್ತಿ ರೋಟರಿ ಶಾಲೆಯಲ್ಲಿ ಕಿವುಡು ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಾರಂಭ 2023-24 ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಾರಂಭಗೊಂಡಿದ್ದು ಶ್ರವಣ ದೋಷವುಳ್ಳ ವಿದ್ಯಾರ್ಥಿಗಳಿಗೆ ಪಾಲಕರು ಈ ಕೂಡಲೇ ಪೂರ್ವ ಪ್ರಾಥಮಿಕ ಹಾಗೂ 1ನೇ ತರಗತಿಯಿಂದ 7ನೇ ತರಗತಿಯವರೆಗೆ ಪ್ರವೇಶ ಪಡೆಯಬಹುದಾಗಿದೆ. ನುರಿತ ವಿಶೇಷ ತಜ್ಞರು ನಮ್ಮಲ್ಲಿದ್ದು ವಿಶೇಷ ತರಬೇತಿಯನ್ನು ಪಡೆದ ಸಿಬ್ಬಂದಿ ವರ್ಗದವರು ನಮ್ಮಲ್ಲಿದ್ದು ಮಕ್ಕಳಿಗೆ ಪಠ್ಯಕ್ರಮದ ಜೊತೆಗೆ ವಿವಿಧ ಕರಕುಶಲಗಳ ಬಗ್ಗೆ ತರಬೇತಿಯನ್ನು ನೀಡುವುದರ ಜೊತೆಗೆ ಕ್ರೀಡೆಯಲ್ಲಿಯೂ ಸಹ ಪ್ರತಿಭೆ ಬರುವಂತೆ ಪ್ರೋತ್ಸಾಹ ನೀಡಲಾಗುವುದು ನಮ್ಮ ಶಾಲೆಯಲ್ಲಿ ಈ ಹಿಂದೆ ಕಲಿತು ಸಾಧನೆ ಮಾಡಿ ಸಂಸ್ಥೆಯ ಹೆಸರನ್ನು ಉತ್ತುಂಗಕ್ಕೇರಿಸಿದ ವಿದ್ಯಾರ್ಥಿಗಳು ಅನೇಕರಿದ್ದಾರೆ. ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಡಳಿತ ಮಂಡಳಿ ವಿನಂತಿಸಿದೆ.
previous post