23.4 C
Hubli
ಮಾರ್ಚ್ 24, 2023
eNews Land
ಸಣ್ಣ ಸುದ್ದಿ

ಮಳೆ ಹಾನಿ ಅಧ್ಯಯನ ತಂಡದ ಎದುರು ರೈತರು ಗರಂ!

Listen to this article

ಇಎನ್ಎಲ್ ಹುಬ್ಬಳ್ಳಿ

ಮಳೆ ಹಾನಿ ಕುರಿತು ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ಅಂತರ ಇಲಾಖಾ ಅಧಿಕಾರಿಗಳ ತಂಡ ಧಾರವಾಡ ಜಿಲ್ಲೆಗೆ ಆಗಮಿಸಿ ಪರಿಶೀಲನೆ ಕೈಗೊಂಡಿದೆ.

ಹುಬ್ಬಳ್ಳಿ ನಗರದ ಶಿವಗಂಗಾ ಲೇಔಟ್, ಬೃಂದಾವನ ಕಾಲೋನಿ ಬಳಿಕ ಕಿರೆಸೂರ, ಹೆಬಸೂರ ಮತ್ತು ಕರ್ಲವಾಡ ಗ್ರಾಮಕ್ಕೆ ಭೇಟಿ ನೀಡಿದರು.

ಈರುಳ್ಳಿ, ಮೆಣಸಿನಕಾಯಿ, ಹತ್ತಿ, ಕಡಲೆ ಹಾನಿ ಕುರಿತು ರೈತರು ತಂಡದ ಎದುರು ಅಳಲು ತೋಡಿಕೊಂಡರು‌.

ಕೇಂದ್ರ ಅಧ್ಯಯನ ತಂಡದ ಸದಸ್ಯ ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದ ಗುರುಪ್ರಸಾದ ಜೆ., ಮತ್ತು ಕೇಂದ್ರ ಸರಕಾರದ ಹಣಕಾಸು ಮಂತ್ರಾಲಯದ ಮಹೇಶ ಕುಮಾರ ಅವರಿಗೆ ಜಿಲ್ಲೆಯ ಅತಿವೃಷ್ಠಿ
( ಮಳೆ ಹಾನಿ) ಹಾನಿ ಕುರಿತು ಜಿಲ್ಲಾಧಿಕಾರಿ ನಿತೇಶ ಪಾಟೀಲ ವಿವರಣೆ ನೀಡಿದರು.

ಬೆಳೆ ವಿಮೆಯನ್ನ ನಮಗೆ ಸರಿಯಾಗಿ ಜಮಾ ಅಗುತ್ತಿಲ್ಲ.
ಬೆಳೆ ವಿಮೆ ಹಣ ಇಂದಿಗೂ ಜಮಾ ಆಗಿಲ್ಲ ಎಂದು ರೈತರ ದೂರಿದರು. ಮಳೆಗೆ ಸಂಪೂರ್ಣ ಬೆಳೆ ಹಾಳಾಗಿದ್ದು ನಮಗೆ ಶೇಕಡಾ 100ರಷ್ಟು ಪರಿಹಾರ ನೀಡಿ. ಈಗ ಎನ್ ಡಿಆರ್ ಎಫ್ ಅಡಿ ನೀಡಲಾಗುತ್ತಿರುವ ಪರಿಹಾರ ಯಾವುದಕ್ಕೂ ಸಾಕಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Related posts

ಉಚಿತ ಕೌಶಲ್ಯ ಆಧಾರಿತ ತರಬೇತಿಗೆ ಅರ್ಜಿ ಆಹ್ವಾನ

eNEWS LAND Team

ನನ್ನ ಗುರಿ ಗೊತ್ತಿದೆ ಆದರೆ ನನ್ನ ವಿಧಿ ಗೊತ್ತಿಲ್ಲ :ಫಾದರ್ ರಾಯಪ್ಪ ಇನ್ನಿಲ್ಲ

eNEWS LAND Team

ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಅರವಿಂದ ಪಾಟೀಲ್ ನೇಮಕ

eNEWS LAND Team