ಇಎನ್ಎಲ್ ಧಾರವಾಡ: ಹುಬ್ಬಳ್ಳಿ ತಾಲೂಕಿನ ರಾಮಾಪೂರ ಗ್ರಾಮದ ರೈತ ಅಣ್ಣಪ್ಪ ಮಹಾದೇವಪ್ಪ ಯಡ್ರಾವಿ ಇವರ ಮನೆಯ ಗೋಮಾತೆ ಕರುವಿಗೆ ಜನ್ಮ ನೀಡಿದ ಕೇವಲ 3ದಿನದಲ್ಲಿ ಮೃತಪಟ್ಟ ಧಾರುಣ ಘಟನೆ ಸಂಭವಿಸಿದೆ.
ನಮ್ಮ ಆಕಳು ಆನೆ ಥರ ಇತ್ತು. ಏಕಾಏಕಿ ಏನಾಯಿತೊ ತಿಳಿಯುತ್ತಿಲ್ಲ ಎಂದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ನಮ್ಮ ಕುಟುಂಬದ ಪಾಲಿಗೆ ಎತ್ತು ಹಾಗೂ ಆಕಳು ಎರಡು ಪಾತ್ರ ನಿರ್ವಹಿಸಿದ ಗೋಮಾತೆ, ಎಲ್ಲ ರೀತಿಯ ಕೃಷಿಯಲ್ಲಿ ತೊಡಗಿ ಸಹಾಯ ಮಾಡುತ್ತಿತ್ತು. ಆದರೆ ಈಗ ಅವೆಲ್ಲ ಕನಸು ಎಂಬಂತಾಗಿದೆ . ಅದೆಲ್ಲ ನೆನಪು ಮಾತ್ರ ಎಂದು ಕಣ್ಣೀರಿಟ್ಟ ರೈತ ಅಣ್ಣಪ್ಪ ಮಹಾದೇವಪ್ಪ ಯಡ್ರಾವಿ ಕಣ್ಣೀರು ಹಾಕಿದರು.