ಇಎನ್ಎಲ್ ಹುಬ್ಬಳ್ಳಿ: ತಾಲೂಕಿನ ಭಂಡಿವಾಡ ಗ್ರಾಮದ ಶ್ರೀ ಮಾರುತಿ ದೇವಸ್ಥಾನದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ
ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮತ್ತು ಧಾರವಾಡ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ಕುಂದಗೋಳಮಠ, ದೀಪ ಬೆಳಗಿಸಿ, ಶ್ರೀ ಮಾರುತಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ನಿಂಗಪ್ಪ ಅಮ್ಮಣ್ಣವರ, ಮುರಗೇಶ ಅಳಗವಾಡಿ, ಮಂಜುನಾಥ ಗಡಿಯಣ್ಣವರ, ಹನುಮಂತ ಹುಚ್ಚಣ್ಣವರ, ನಿಂಗಪ್ಪ ಅಸುಂಡಿ, ದತ್ತು ಕಂಪ್ಲಿ, ಮಂಜುನಾಥ ನಾಯ್ಕರ, ಲಕ್ಷ್ಮಣ ಅಳಗವಾಡಿ, ಬಸವರಾಜ ಅಳಗವಾಡಿ, ಗೋವಿಂದ ತಳವಾರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.